ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜಲಾಶಯದ ನಾಲೆಗಳ ಪರಿಶೀಲನೆ ನಡೆಸಿದ ಶಾಸಕ ಎಂ ಆರ್ ಮಂಜುನಾಥ್

ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮನ ಗುಡ್ಡೆ ಬಳಿ ಬರುವ ನಾಲೆಗಳು ಸೇರಿದಂತೆ ಅಜ್ಜಿಪುರ ಬಳಿ ಬರುವ ಉಡುತೊರೆ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳನ್ನು ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ತೆರಳಿ ಪರಿಶೀಲನೆ ನಡೆಸಿದರು.

ಬಹುತೇಕ ತಾಲೂಕಿನಲ್ಲಿರುವ ಜಲಾಶಯದ ಕಾಲುವೆಗಳು ರಾಡಿ ಹಾಗೂ ಗಿಡ ಗಂಟೆಗಳು ಬೆಳೆದು ನಿಂತಿದ್ದು ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳುವ ನಾಲೆಗಳನ್ನು ಸ್ವಚ್ಛಗೊಳಿಸಲು ಕ್ರಿಯಾಯೋಜನೆ ತಯಾರಿಸಿ ತಕ್ಷಣ ದುರಸ್ತಿಯಾಗಿರುವ ನಾಲೆಗಳನ್ನು ಸರಿಪಡಿಸಿ ರೈತರ ಜಮೀನುಗಳಿಗೆ ನೀರನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಜೊತೆಗೆ ನಾಳೆಗಳಲ್ಲಿ ಬರುವ ರೈತರ ಜಮೀನಿಗೆ ತೆರಳುವ ಕಿರು ಸೇತುವೆಗಳು ಸಹ ದುರಸ್ತಿಗೆ ಒಳಗಾಗಿ ರಾಡಿ ಮತ್ತು ಮಣ್ಣು ಮುಚ್ಚಿದ್ದು ಕೂಡಲೇ ಅದನ್ನು ಸರಿಪಡಿಸಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಡಿ ಮತ್ತು ಮಣ್ಣನ್ನು ತೆಗೆದು ಕಿತ್ತು ಬಂದಿರುವ ನಾಲೆಗಳನ್ನು ದುರಸ್ತಿಪಡಿಸಬೇಕು ಎಂದು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೀಕ್ಷಣೆ:
ರಾಮನ ಗುಡ್ಡೆ ಹಾಗೂ ಉಡುತೊರೆ ಜಲಾಶಯದ ರೈತರ ಜಮೀನಿಗೆ ತೆರಳುವ ನಾಲೆಗಳನ್ನು ಪರಿಶೀಲಿಸಲು ಬಸಪ್ಪನ ದೊಡ್ಡಿ ಅಜ್ಜಿಪುರ ಗಂಗನದೊಡ್ಡಿ ಕೆ.ಗುಂಡಾಪುರ ಮಂಚಾಪುರ ಕಿರೇಪತಿ ಹಳ್ಳ, ಯಾರಂಬಾಡಿ ಸೇರಿದಂತೆ ರಾಮಪುರ ಇನ್ನಿತರ ಗ್ರಾಮಗಳಲ್ಲಿ ಶಾಸಕ ಮಂಜುನಾಥ್ ಅಧಿಕಾರಿಗಳ ಜೊತೆ ತೆರಳಿ ಪರಿಶೀಲಿಸಿ ಕೂಡಲೇ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತುರ್ತಾಗಿ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಏ.ಇ.ಇ ನಿರಂಜನ್ ಏ.ಇ ಅಭಿಲಾಷ್ ಹಾಗೂ ಲ್ಯಾಂಡರ್ಮಿ ಎ ಇ.ಇ ಚಿಕ್ಕವೀರಯ್ಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಚಿನ್ನಣ್ಣ ಹಾಗೂ ಮುಖಂಡರುಗಳಾದ ಚಿಂಚಳ್ಳಿ ಗುರುಮಲ್ಲಪ್ಪ ಚಿನ್ನವೆಂಕಟಾ,ಮಣಗಳ್ಳಿ ಶಿವಪ್ಪ ಶಾಗ್ಯ ಬಾಬಣ್ಣ,ಪೊನ್ನಾಚ್ಚಿ ಡಿಕೆ ರಾಜು,ಉದ್ದನೂರು ಗ್ರಾಮದ ಯುವ ನಾಯಕ ಗಿರೀಶ್,ಎಸ್.ಆರ್ ಮಹಾದೇವ್,ಬಸಪ್ಪನ ದೊಡ್ಡಿ ರಫೀಕ್, ಷಣ್ಮುಗಿ,ರವಿ,ಬಾಬು, ಶ್ರೀರಂಗ,ಚನ್ನಲಿಂಗನಹಳ್ಳಿ ವೆಂಕಟೇಶ್ ಇನ್ನಿತರರು ಉಪಸ್ಥಿತರಿದ್ದರು.

ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ