ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಂಗೀತ ಪರೀಕ್ಷೆಗಳನ್ನು ಗದಗ ಜಿಲ್ಲಾ ಕೇಂದ್ರದಲ್ಲಿಯೇ ಮುಂದುವರೆಸಲಿ

ಗದಗ:ವಿಶೇಷ ಸಂಗೀತ ತಾಳ ವಾದ್ಯ-ಲಿಖಿತ ಪ್ರಾಯೋಗಿಕ ಪರೀಕ್ಷೆಗಳನ್ನು ಗದಗ ಜಿಲ್ಲಾ ಕೇಂದ್ರದಲ್ಲಿಯೇ ಮುಂದುವರೆಸುವಂತೆ ಸರಕಾರಕ್ಕೆ ಗದಗ ಜಿಲ್ಲೆಯ ಜಂತಲಿ ಶಿರೂರು ಗ್ರಾಮದ ಜನಪದ ಕಲಾವಿದ ಗವಿಶಿದ್ಧಯ್ಯ ಜ ಹಳ್ಳಿಕೇರಿಮಠ ಆಗ್ರಹಿಸಿದ್ಧಾರೆ.
ರಾಜ್ಯ ಮಟ್ಟದ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳನ್ನು ರಾಜ್ಯದ ಸುಮಾರು 18ಜಿಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮೈಸೂರಿನ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ ನಡೆಸಲಾಗತ್ತದೆ,ಈ ಮೊದಲು ಬೆಂಗಳೂರಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ಅನೇಕ ವರ್ಷಗಳಿಂದ ಪರೀಕ್ಷೆಗಳನ್ನು ಆಯಾ ಜಿಲ್ಲಾ ಡಯಟ್ ಕೇಂದ್ರಗಳ ಮೂಲಕ ನಡೆಸುತ್ತಿದ್ಧರು ಇದು ಎಲ್ಲಾ ಅಂಧ,ಅನಾಥ ಅಂಗವಿಕಲ ಬಡಮಕ್ಕಳಿಗೆ ಅನೂಕುಲವಾಗುತ್ತಿತ್ತು ಆದರೇ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದವರು ಇ ಬಾರಿ ಗದಗ ಜಿಲ್ಲೆಯನ್ನು ಬಿಟ್ಟು ಸಂಗೀತ ಪರೀಕ್ಷೆ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಬೇರೆ ಬೇರೆ ಕಡೆ ಕೇಂದ್ರಗಳನ್ನು ಆಯ್ಕೆ ಮಾಡಿದ್ಧಾರೆ.
ಇದರಿಂದ ಗದಗ ನಗರದಲ್ಲಿರುವ ವಿರೇಶ್ವರ ಪುಣ್ಯಾಶ್ರಮದ ಅಂಧ,ಅನಾಥ ವಿಶೇಷ ಮಕ್ಕಳಿಗೆ ತೊಂದರೆಯಾಗುತ್ತದೆ.

ಸಂಗೀತ ವಾದ್ಯಗಳಾದ ಹಾರ್ಮೋನಿಯಂ, ತಂಬೂರಿ,ತಬಲಾ,ವಯೋಲಿನ ,ಸಿತಾರ,ಇತರೆ ಎಲ್ಲಾ ವಾದ್ಯಗಳನ್ನು ಪ್ರತ್ಯೇಕ ವಾಹನ ಮಾಡಿಕೊಂಡು ಪರೀಕ್ಷಾ ಕೇಂದ್ರಗಳಿಗೆ ತೆರಳುವದು ತುಂಬಾ ತೊಂದರೆಯಾಗುತ್ತದೆ,ಅಂಧ ಕಲಾವಿದರ ಜೀವದ ಜೊತೆಗೆ ಚಲ್ಲಾಟ ಆಡುವುದು ಸರಿಯಲ್ಲ.
ಪಂಡಿತ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಅದ್ಭುತ ಐತಿಹಾಸಿಕ ಇತಿಹಾಸ ಹೊಂದಿದೆ,ಇ ಶಾಲೆ ಊಟ, ವಸತಿ ಸಹಿತ ವಿದ್ಯಾದಾನ ಮಾಡುತ್ತಿದೆ ಸಂಗೀತ ಶಿಕ್ಷಕರನ್ನು ತಯಾರಿಸುವ ನಾಡಿನ ಅತ್ಯುತ್ತಮ ಸಂಸ್ಥೆಯಾಗಿದೆ.
ಸರಕಾರದ ಜಾಣಕುರುಡು ನೀತಿ ಅಂಗವಿಕಲರ ಜೀವನದ ಭವಿಷ್ಯತ್ತಿಗೆ ಮಾರಕವಾಗುತ್ತದೆ ಆದ್ಧರಿಂದ ಈ ಮೊದಲಿನಂತೆ ಗದಗ ಜಿಲ್ಲಾ ಕೇಂದ್ರದಲ್ಲೆ ಸಂಗೀತ ಪರೀಕ್ಷೆಗಳು ನಡೆಯುವಂತಾಗಬೇಕು ಎಂದು ಹಳ್ಳಿಕೇರಿಮಠ ಸರಕಾರಕ್ಕೆ ಒತ್ತಾಯಿಸಿದ್ಧಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ