ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೊಟ್ಟೂರಿನ ತರಕಾರಿ ಮಾರ್ಕೆಟ್ ಈಗ ಕೆಸರುಗದ್ದೆ

ದುರ್ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ವಿಜಯನಗರ/ಕೊಟ್ಟೂರು: ಶಿಕಾರಿಪುರ ಆಗಿದ್ದ ಈ ಊರು ಕೊಟ್ಟೂರೇಶ್ವರ ಸ್ವಾಮಿ ಬಂದು ಇಲ್ಲಿ ನೆಲೆಸಿದ ಮೇಲೆ ಕೊಟ್ಟೂರು ಎಂದು ಪ್ರಖ್ಯಾತಿ ಪಡೆದಿದೆ ಕೊಟ್ಟೂರೇಶ್ವರ ಸ್ವಾಮಿ ಇರುವುದರಿಂದ ಈ ಕ್ಷೇತ್ರವು ಪುಣ್ಯಕ್ಷೇತ್ರ ಎಂದು ಹೆಸರುವಾಸಿಯಾಗಿದೆ ಆದರೆ ತೇರು ಬೀದಿಯ ತರಕಾರಿ ಮಾರುಕಟ್ಟೆ ಕೆಸರು ಗದ್ದೆಯಾಗಿದೆ ಇದರಿಂದ ದುರ್ವಾಸನೆ ಬೀರುತ್ತಿದೆ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ನೋಡಿಯೂ ನೋಡದಂತೆ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಪಟ್ಟಣ ಪಂಚಾಯ್ತಿಯ ಕಸದ ಗಾಡಿಗಳಲ್ಲಿ “ಮಳೆಗಾಲದಲ್ಲಿ ಹೆಚ್ಚು ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ ಎಂದು ಹಾಡನ್ನು ಹಾಕುತ್ತಾ ಜನರನ್ನು ಎಚ್ಚರಗೊಳಿಸುತ್ತಾರೆ ತಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿಡಿ” ಎಂದು ಆದರೆ ಪ್ರತಿದಿನ ಸಾವಿರಾರು ಮಂದಿ ಓಡಾಡುವ ಕೊಟ್ಟೂರು ತರಕಾರಿ ಮಾರ್ಕೆಟ್ ಕೆಸರು ಗದ್ದೆಯಾಗಿದರೂ ಇದನ್ನು ಸ್ವಚ್ಛ ಮಾಡುವುದು ಆಗುತ್ತಿಲ್ಲ ಉದಾಹರಣೆಗೆ ಮಾಡುವುದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಅನ್ನೋ ತರ ಇದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ರಾಜ್ಯದಂತ ಡೆಂಗ್ಯೂ ಜ್ವರದಿಂದ ಜನರು ತತ್ತರಿಸಿ ರೋಸಿ ಹೋಗಿದ್ದಾರೆ ಈ ರೀತಿ ವ್ಯವಸ್ಥೆ ಇದ್ದರೆ ಜನರು ಕಾಯಿಲೆಗೆ ತುತ್ತಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಇನ್ನಾದರೂ ಕೊಟ್ಟೂರು ತರಕಾರಿ ಮಾರ್ಕೆಟ್ ಸ್ವಚ್ಛ ಮಾಡಬೇಕು ಇದರಿಂದ ಅನೇಕ ತೊಂದರೆಗಳು ಉಂಟಾಗಿವೆ ಕೆಸರು ಗದ್ದೆಯಲ್ಲಿ ಚಿಕ್ಕ ಮಕ್ಕಳು ಅಜ್ಜ ಅಜ್ಜಿಯರು ಬಿದ್ದಿರುವ ಎಷ್ಟೋ ಘಟನೆಗಳು ನಡೆದಿವೆ ಬೈಕ್ ಸವಾರರು ಬಿದ್ದಿರುವ ಸಂಗತಿಗಳು ಇವೆ ಇದನ್ನು ಅನುಭವಿಸಿದ ಸಾರ್ವಜನಿಕರು ಇದಕ್ಕೆ ಸಂಬಂಧಪಟ್ಟ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ಇಡೀ ಶಾಪವನ್ನು ಹಾಕಿದರು.ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಸರಿಪಡಿಸಿ ಜನರು ಓಡಾಡುವುದು ಅನುಕೂಲ ಮಾಡಬೇಕು ಎಂದು ನಮ್ಮ ಪತ್ರಿಕೆಯ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.

ವರದಿ. ವೈ. ಮಹೇಶ್ ಕುಮಾರ್ ಕೊಟ್ಟೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ