ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸರ್ಕಾರಿ ಪ್ರೌಢಶಾಲೆ ಚಿತ್ತಾಪುರದಲ್ಲಿ ಅದ್ದೂರಿ ಶಿಕ್ಷಕರ ದಿನಾಚರಣೆ

ಕಲಬುರಗಿ:ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮುಖಾಂತರ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಶಿರಾಯ ಎಸ್. ಪ್ರಭಾರಿ ಮುಖ್ಯ ಗುರುಗಳು ವಹಿಸಿದ್ದರು,ಎಲ್ಲಾ ಶಿಕ್ಷಕ ಸಿಬ್ಬಂದಿಯವರು ವೇದಿಕೆ ಮೇಲೆ ಆಸೀನರಾಗಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಮಾಧ್ಯಮದಿಂದ ಕಿರಣ್ ಕುಮಾರ್, ಉರ್ದು ಮಾಧ್ಯಮದಿಂದ ಆಫೀಫಾ ಮಾಡಿದರು,ಪ್ರಾರ್ಥನಾ ಗೀತೆಯನ್ನು ನುಸರತ್ ಮತ್ತು ಸಂಗಡಿಗರು ಹಾಡಿದರು. ಶ್ರೀ ರವಿ ಬಿ ಕುಲಕರ್ಣಿ ಮತ್ತು ಶ್ರೀ ಕಲೀಮ್ ಅಬಿದ್ ಎಂ.ಎ ಅವರು ಮಕ್ಕಳಿಗೆ ಮಾರ್ಗದರ್ಶನ ಮಾಡಿದರು. ಬಿಎಡ್‌ ನ ಪ್ರಶಿಕ್ಷಣಾರ್ಥಿಗಳು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಬಿಎಡ್‌ ಪ್ರಶಿಕ್ಷಣಾರ್ಥಿಗಳು ಡಾ.ರಾಜಕುಮಾರ್ ದುಮ್ಮನ್ಸೂರ್ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದ ಪ್ರಯುಕ್ತ ವಿಶೇಷ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ
ಶ್ರೀಮತಿ ಸಬಿಹ ಯಾಸ್ಮಿನ್, ಶ್ರೀಮತಿ ಫರ್ಜಾನ ಬೇಗಮ್,ಶ್ರೀಮತಿ ಪರಿಹೀನ್ ಬೇಗಂ,
ಶ್ರೀಮತಿ ಅನೀಶ್ ಫಾತಿಮಾ,
ಶ್ರೀಮತಿ ರೇಖಾ ಮನಗೂಳಿ ಕರ್,
ಶ್ರೀಮತಿ ವಿಜಯಲಕ್ಷ್ಮಿ ಲಮಾಣಿ,
ಶ್ರೀಯುತ ಹಯ್ಯಾಳಿ,
ಶ್ರೀ ನರಸಿಂಹ ಅಲ್ಮೆಲ್ಕರ್,
ಶ್ರೀ ನಾಗೇಂದ್ರಪ್ಪ ಕಾಶಿ,
ಶ್ರೀ ರಾಜಶೇಖರ್ ನಾಲ್ವರ್,
ಶ್ರೀ ಬಸಲಿಂಗಯ್ಯ ಸ್ವಾಮಿ, ಶ್ರೀಮತಿ ಭಾಗ್ಯಶ್ರೀ, ಉಳಿದ ಎಲ್ಲಾ ಶಿಕ್ಷಕ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ರವಿ ಬಿಕೆ ವಂದಿಸಿದರು.

ವರದಿ ಮೊಹಮ್ಮದ್ ಅಲಿ ಚಿತ್ತಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ