ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 3ನೇ ವರ್ಷದ ಮಹಾಜನ ಸಭೆ

2023-24ನೇ ಸಾಲಿನ 3ನೇ ವಾರ್ಷಿಕ ಮಹಾಜನ ಸಭೆ
ಸಂಘದಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಎನ್ ಹೇಮಗಿರಿ ಗೌಡ್ರು ಕರೆ.

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 3ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಜನ ಸಭೆಯನ್ನು ಇಂದು ಸಂಘದ ಕಛೇಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂಘದ ಅಧ್ಯಕ್ಷರಾದ ಶ್ರೀ ಎನ್ ಹೇಮಗಿರಿ ಗೌಡ್ರು ಇವರು ಮಾತನಾಡಿ ಸಂಘವು 3 ವರ್ಷಗಳಲ್ಲಿ 499 ಜನ ಸದಸ್ಯರನ್ನು ಒಳಗೊಂಡು, 6.33 ಲಕ್ಷ ರೂಗಳ ಷೇರು ಹೊಂದಿದೆ, ಸಂಘವು 3 ವರ್ಷದಲ್ಲಿ 47.84 ಲಕ್ಷ ರೂ ಗಳ ಕೆ.ಸಿ.ಸಿ. ಸಾಲ ವಿತರಿಸಿದೆ, 43.08 ಲಕ್ಷ ರೂ ಗಳ ಪಿಗ್ಮಿ ಸಂಗ್ರಹಣೆ ಮಾಡಿ, 39.15 ಲಕ್ಷ ರೂ.ಗಳ ಎನ್.ಎ.ಬಿ.ಡಿ.ಪಿ. ಸಾಲ ವಿತರಿಸಲಾಗಿದೆ, ಒಟ್ಟಾರೆಯಾಗಿ 86.99 ಲಕ್ಷ ರೂ ಗಳ ಸಾಲ ವಿತರಿಸಿದೆ. ಸಂಘದ ಷೇರುದಾರ ರೈತ ಸದಸ್ಯರ ಅನುಕೂಲಕ್ಕಾಗಿ ಸುಮಾರು 9.19 ಲಕ್ಷ ರೂ ಗಳ ರಸಗೋಬ್ಬರ ಖರೀದಿಸಿ, ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು ಹಾಗೂ
ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯಲ್ಲಿ 141 ಕುಟುಂಬಗಳು ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡಿವೆ ಎಂದು ತಿಳಿಸಿದರು.

ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ವಿ. ರವಿಯವರು ಸಂಘದ 2023-24ನೇ ಸಾಲಿನ ಲೆಕ್ಕ ಪರಿಶೋಧನೆ ಕೈಗೊಳ್ಳಲಾಗಿದ್ದು, ಸಂಘವು 97,459 ರೂ ಗಳ ನಿವ್ವಳ ಲಾಭ ಗಳಿಸಿದೆ, ಲೆಕ್ಕ ಪರಿಶೋಧನೆಯಲ್ಲಿ ಬಿ ಶ್ರೇಣಿ ಪಡೆದಿದೆ ಎಂದು ಲೆಕ್ಕಪಾರಿಶೋಧನಾ ವರದಿ ಮಂದಿಸಿದರು, ಸಂಘದ ಪ್ರಸಕ್ತ ವರ್ಷದ ಮುಂಗಡ ವಾರ್ಷಿಕ ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಂ.ವೀರಣ್ಣ, ಬಿ.ಮಾರುತಿ, ಹೆಚ್.ಎಂ.ವೀರಭದ್ರಯ್ಯ, ನಂದಿಬಂಡಿ ಕೊಟ್ರೇಶ್, ಎಂ.ಬಸವರಾಜ, ಎನ್.ಮಂಜುನಾಥ, ಬಿ.ಪ್ರೇಮಕ್ಕ ಉಪಸ್ಥಿತರಿದ್ದರು,
ಕೋಗಳಿ, ಕೆ.ಕೋಡಿಹಳ್ಳಿ, ಹಾಗೂ ಕೆ ಕೆ ತಾಂಡ, ಗ್ರಾಮದ ಎಲ್ಲಾ ಷೇರುದಾರ ಸದಸ್ಯರುಗಳು 3ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಜನ ಸಭೆಗೆ ಆಗಮಿಸಿ, ಸಭೆಯನ್ನು ಯಶಸ್ವಿಗೊಳಿಸಿದರು. ಕು.ಬಿ. ಎಂ ನಂದಿನಿ ಪ್ರಾಥನೆ ಹಾಡಿದರು.
ಸಂಫದ ಸಿಬ್ಬಂದಿಗಳಾದ ಕೆ.ಉಮೇಶ, ಬಿ ಕೋಟೆಪ್ಪ, ಸಿ ಗೋಣ್ಣೆಪ್ಪ ಪಿಗ್ಮಿ ಸಂಗ್ರಹಕ ಟಿ ಎಂ ಮಹೇಶ್ ಹಾಗೂ ಇತರರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ