ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನವ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ

ವಿಜಯನಗರ/ ಕೊಟ್ಟೂರು: ಕನ್ನಡ ಭಾಷೆಯ ಸಂಸ್ಕೃತಿ, ಸಂಪ್ರದಾಯ ಹಾಗೂ ನೆಲ ಜಲ ಗಡಿ ರಕ್ಷಣೆಗೆ ನವ ಕರ್ನಾಟಕ ರಕ್ಷಣಾ ವೇದಿಕೆಯ ಸಂಘಟನೆಯು ಕಂಕಣ ಬದ್ಧವಾಗಿದೆ. ಸಮಾಜಮುಖಿ ಚಿಂತನೆಯ ಜೊತೆಗೆ ವರ್ತಮಾನ ಸಮಸ್ಯೆಗಳಿಗೆ ಸ್ಪಂದಿಸಲು ಸಕ್ರಿಯವಾಗಿ ಹೋರಾಟ ಮಾಡುವ ಮೂಲಕ ಕನ್ನಡ ತಾಯಿಯ ಋಣ ತೀರಿಸಲು ಇದೊಂದು ಉತ್ತಮ ಅವಕಾಶ, ನಾಡಿನ ಪ್ರಗತಿ ವಿವಿಧತೆಯಲ್ಲಿ ಏಕತೆ ಶಾಂತಿ ವ್ಯವಸ್ಥೆ ಮತ್ತು ಸರ್ವ ಧರ್ಮ ಸಮನ್ವಯತೆಗೆ ಸಕ್ರಿಯವಾಗಿ ದುಡಿಯುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಈ ಹಿನ್ನೆಲೆಯಲ್ಲಿ, ನವ ಕರ್ನಾಟಕ ನಾಡ ರಕ್ಷಣಾ ವೇದಿಕೆಯ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಮಂಜುನಾಥ ಬಿ. ಹಾಗೂ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜಿ ಗಣೇಶ್ ಅಲಬೂರು, ಎಸ್ ಅವಿನಾಶ್ ನವ ಕರ್ನಾಟಕ ರಕ್ಷಣಾ ವೇದಿಕೆ (ಕಲ್ಯಾಣ ಕರ್ನಾಟಕ ಸಂಘಟನಾ ಕಾರ್ಯದರ್ಶಿ) ಅಲಬೂರು ಇವರುಗಳ ಸಮ್ಮುಖದಲ್ಲಿ ಕೊಟ್ಟೂರು ತಾಲೂಕಿನ ನೂತನ ನವ ಕರ್ನಾಟಕ ನಾಡ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರನ್ನಾಗಿ ಉತ್ತಂಗಿ ಕರಿಬಸಪ್ಪ ರಾಂಪುರ ಇವರನ್ನು ಅಧಿಕೃತವಾಗಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುತ್ತಾರೆ. ಈ ಸಂದರ್ಭದಲ್ಲಿ
ಎನ್ ಹೇಮಣ್ಣ ಸಿವಿಲ್ ಗುತ್ತಿಗೆದಾರರು ಅಲಬೂರು,
ಎಸ್ ಎಸ್ ಎಂ ಶಿವರುದ್ರಯ್ಯ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಎ. ಬಿ. ಜಂಬಣ್ಣ ಗ್ರಾಮ ಪಂಚಾಯಿತಿ ಸದ್ಯರು ಅಲಬೂರು,
ಪಿ ನಾಗರಾಜ ಚಿರಿಬಿ ಮಹಾಶಕ್ತಿ ಕೇಂದ್ರದ ಬಿ.ಜೆ.ಪಿ ಅಧ್ಯಕ್ಷರು ಹಾಗೂ ಎನ್. ಸುರೇಶ್ ಚಿರಿಬಿ ಮಹಾಶಕ್ತಿ ಕೇಂದ್ರದ ಬಿ.ಜೆ.ಪಿ ಕಾರ್ಯದರ್ಶಿ ಚಪ್ಪರದಹಳ್ಳಿ, ಉತ್ತಂಗಿ ಹಾಲೇಶ್, ಮಹೇಶ್ ಲಕ್ಕಿ ಡ್ರೆಸೆಸ್, ಎಸ್. ರೇವಣ್ಣ, ಗೆದ್ದಲಗಟ್ಟಿ ಕೊಟ್ರೇಶ್ ಕೊಟ್ಟೂರು, ಉಪಸ್ಥಿತರಿದ್ದರು.

ವರದಿಗಾರರು – ಎನ್. ಚಂದ್ರಗೌಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!