
ಬೀದರ ಜಿಲ್ಲೆಯ ಬಸವಕಲ್ಯಾಣ ತಾಲುಕಿನ ಮುಡಬಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಮುಡಬಿಯಿಂದ ಹಾರಕೂಡ ಹೋಗುವ ಮಧ್ಯದಲ್ಲಿ ಬರುವ ಭೂಮಿ ಸರ್ವೆ ನಂ. 227 ಈ ಭೂಮಿಯಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ, ನಾವು ಸದರಿ ಅಕ್ರಮ ಮರಳು ಸಾಗಾಟ ಮಾಡುವವರನ್ನು ವಿಚಾರಿಸಿದಾಗ ಸದರಿ ವ್ಯಕ್ತಿಗಳು ರಾಯಲ್ಟಿ ತೋರಿಸಿ, ಬೇರೆ ಭೂಮಿಯ ಮರಳು ಅಕ್ರಮ ಸಾಗಾಟ ಮಾಡುತ್ತಿದ್ದಾರೆ. ರಾಯಲ್ಟಿ ತೋರಿಸಿರುವ ಭೂಮಿಯ ಬೇರೆ ಅಕ್ರಮಮರಳು ಸಾಗಾಟ ಮಾಡುತ್ತಿದ್ದ ಭೂಮಿಯೇ ಬೇರೆಯಾಗಿರುತ್ತದೆ. ಅಕ್ರಮ ಮರಳು ಸಾಗಾಟದಿಂದ ರಸ್ತೆ ಸಂಪೂರ್ಣ ಹಾಳಾಗಿರುತ್ತದೆ. ಇದರಿಂದ ವಾಹನ ಸಂಚಾಲಕರಿಗೆ ಸುಗಮ ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಆದ ಕಾರಣ ಈ ಕೂಡಲೇ ಅಕ್ರಮ ಮರಳು ಸಾಗಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಬಸವಕಲ್ಯಾಣ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.
ವರದಿ: ಶ್ರೀನಿವಾಸ ಬಿರಾದಾರ




















