ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ

ವಿಷಯ : ಆತ್ಮೀಯ ವ್ಯಕ್ತಿ ಪರಿಚಯ

ವ್ಯಕ್ತಿ : ಅಮ್ಮ (ಹೆಸರು ರತ್ಮಮ್ಮ )

ನನ್ನ ಅಮ್ಮ ನನಗೆ ತುಂಬಾ ಆತ್ಮೀಯ ವ್ಯಕ್ತಿ.
ನನಗೆ ಮಾತ್ರ ಅಲ್ಲ ಬಹುತೇಕ ಎಲ್ಲರಿಗೂ ಹೆಚ್ಚು ಆತ್ಮೀಯ ಆಗಿರುತ್ತಾರೆ.
ನಾನು ಭೂಮಿಗೆ ಬರುವ ಮುನ್ನವೇ ಅವಳೊಂದಿಗೆ ಆತ್ಮೀಯತೆ ಬೆಸೆದಿದೆ.
ನನ್ನ ಅಮ್ಮ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚೋಕನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಎಂಟು ಮಕ್ಕಳಲ್ಲಿ ಆರನೇಯವರಾಗಿ ಜನಿಸಿದ್ದಾರೆ.
ನನ್ನ ಅಮ್ಮ ಎಂಟನೇ ತರಗತಿ ಮಾತ್ರ ಓದಿರುವುದು, ಆದರೂ ಪ್ರತಿಭಾವಂತೆ.
ರಂಗುರಂಗಿನ ಚಿತ್ತಾರದ ರಂಗೋಲಿ ಬಿಡಿಸುತ್ತಾಳೆ. ಹಬ್ಬ, ಮದುವೆ ಸಮಾರಂಭದಲ್ಲಿ ಸಕ್ರಿಯವಾಗಿ ಹಾಡುತ್ತಾರೆ.
ನಾನು ನನ್ನ ಅಮ್ಮನಿಗೆ ಚಕ್ಕುಲಿ ಚತುರೆ ಅಂತ ತಮಾಷೆ ಮಾಡುವೆ. ನನ್ನ ಅಮ್ಮ ಮಾಡುವ ಚಕ್ಕುಲಿ ಅಂದ್ರೆ ಎಲ್ಲರಿಗೂ ಪ್ರಿಯ. ಬೇಲೂರು ತಾಲೂಕಿನ ನಾರಾಯಣಪುರ ಗ್ರಾಮದ ಲೋಕೇಶರೊಂದಿಗೆ (ಅಂದ್ರೆ ನಮ್ಮ ಅಪ್ಪ ) ಮದುವೆ ಆಗುತ್ತದೆ.
ನನ್ನ ಅಮ್ಮ ಅತ್ತಿಗೆ ನಾದಿನಿ ಓರಗಿಗಿತ್ತಿ ಯಾವ ಸಂಬಂಧಿಕರೊಡನೆ ಒಮ್ಮೆಯೂ ಜಗಳ ಮಾಡಿಕೊಂಡಿಲ್ಲ. ಎಲ್ಲರನ್ನೂ ಬೇಧವಿಲ್ಲದೆ ಒಂದೇ ರೀತಿ ಕಾಣುತ್ತಾರೆ ಊರಿನ ಮತ್ತು ಸಂಬಂಧಿಕರ ಮದುವೆ ಸಮಾರಂಭದಲ್ಲಿ ಶಾಸ್ತ್ರ ಮಾಡುವುವರಲ್ಲಿ ನಿಪುಣೆ.
ನನ್ನ ಅಪ್ಪನಿಗೆ ಅಮ್ಮನ ಮೇಲೆ ತುಂಬಾ ಪ್ರೀತಿ, ಆದ್ರೆ ಅವರು ಹೇಳಿದ್ದು ಕೇಳದಿದ್ದರೆ ಸ್ವಲ್ಪ ರೇಗಿ ಹುಸಿ ಮುನಿಸಿಕೊಳ್ಳುತ್ತಿದ್ದರು. ಆದ್ರೂ ನಮ್ಮ ಅಮ್ಮ ತಕ್ಷಣ ಪ್ರತ್ಯುತ್ತರ ಕೊಟ್ಟರು, ಸ್ವಲ್ಪ ಸಮಯದ ಬಳಿಕ ಅವರೇ ಮಾತನಾಡಿಸಿ ಜೊತೆಯಲ್ಲಿ ಊಟ ಮಾಡಿ ರಾಜಿ ಆಗುತ್ತಿದ್ದರು.
ಸ್ವಾಭಿಮಾನದ ಪ್ರತೀಕ ಒಂದು ಹೊತ್ತು ಉಪವಾಸ ಇದ್ದರು ಯಾರನ್ನೂ ಕೇಳಲ್ಲ. ಆದರೆ ಬೇರೆಯವರಿಗೆ ಕೊಡುವುದೆಂದರೆ ತುಂಬಾ ಖುಷಿ. ಅತ್ತೆ ಸಿದ್ದಮ್ಮನನ್ನು ಜೊತೆಯಲ್ಲಿಟ್ಟುಕೊಂಡು ಜೋಪಾನ ಮಾಡಿದ್ದಾರೆ.
ಅಂದರಾದ ಮೈದುನ ಶಾಂತಪ್ಪರನ್ನು ತನ್ನ ಸ್ವಂತ ಸಹೋದರನಂತೆ ನೋಡಿಕೊಳ್ಳುತ್ತಿದ್ದಾರೆ.
ಇನ್ನೂ ಬೀಗರು ನನ್ನ ಅತ್ತೆಯೊಂದಿಗೆ ಗೆಳತಿಯಂತೆ ಬೆರೆಯುತ್ತಾರೆ. ಮೊಮ್ಮಕ್ಕಳಿಗೂ ಅವರಿಗೂ, ಅವಿನಾಭಾವ ಸಂಬಂಧ. ಅವರೊಡನೆ ಆಡಿ ನಲಿಯುತ್ತಾರೆ. ಅಮ್ಮನ ಬಗ್ಗೆ ಎಷ್ಟು ಬರೆದರು ಮುಗಿಯುವುದಿಲ್ಲ. ಇವರ ಮಗಳಾಗಿ ಹುಟ್ಟಿರುವುದು ನನ್ನ ಪುಣ್ಯ.

✍️ ಭವ್ಯ ಸುಧಾಕರ ಜಗಮನೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ