ವಿಜಯನಗರ / ಹೊಸಪೇಟೆ : ಮೂರು ರಾಜ್ಯಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ (ತುಂಗಭದ್ರಾ ಅಣೆಕಟ್ಟು) ಜಲಕಂಟಕ ಎದುರಾಗಿದ್ದು, ಜಲಾಶಯದ ನೀರು ಸಂಪೂರ್ಣ ಮಲಿನವಾಗಿ, ಹಸಿರು ಬಣ್ಣಕ್ಕೆ (ಹಸಿರು ಬಣ್ಣ) ತಿರುಗಿದೆ.
ಇದೇ ಹಸಿರು ಬಣ್ಣಕ್ಕೆ ತಿರುಗಿದ, ಕುಡಿಯಲು ಯೋಗ್ಯವಲ್ಲದ ನೀರೇ ಮೂರು ರಾಜ್ಯಗಳ 8 ಜಿಲ್ಲೆಗಳ ಜನರಿಗೆ ಅನಿವಾರ್ಯ ಎನ್ನುವಂತಾಗಿದೆ.ಈ ಮೊದಲು ಹಲವು ಬಾರಿ ತುಂಗಭದ್ರಾ ಜಲಾಶಯದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ.
ಜಲಾಶಯದ ನೀರು ಮಲೀನಗೊಂಡ ಬೃಹತ್ ಗಾತ್ರದ ಮೀನುಗಳು ಆಮ್ಲಜನಕದ ಕೊರತೆಯಿಂದ ಸಾಯುತ್ತಿವೆ. ಹೀಗೇ ಸತ್ತು ಬಿದ್ದ ಮೀನುಗಳು ಜಲಾಶಯದ ಹಿನ್ನೀರು ಪ್ರದೇಶಕ್ಕೆ ತೇಲಿ ಬರುತ್ತಿವೆ.
ಕಾರ್ಖಾನೆಗಳು ಹಾಗೂ ನಗರಗಳ ತ್ಯಾಜ್ಯವನ್ನು ನದಿಗೆ ಹರಿಬಿಟ್ಟ ನೀರು ಹಸಿರುಬಣ್ಣಕ್ಕೆ ತಿರುಗಿದೆ.
ವರದಿ : ಜಿಲಾನ್ ಸಾಬ್ ಬಡಿಗೇರ.
