
ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಹಿರೇಮಠದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಶ್ರೀ ರೇವಣಸಿದ್ದೇಶ್ವರ ಮೂರ್ತಿ ಹಾಗೂ ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ಯವಾಗಿ ಶ್ರೀ ಮಠದ ಪೂಜ್ಯರಾದ ಷ. ಬ್ರ. ಶ್ರೀ ಬಸವಲಿಂಗ ಶಿವಾಚಾರ್ಯರು ಇವರ ನೇತೃತ್ವದಲ್ಲಿ 22.04.2025 ರಿಂದ 02. 05. 2025 ರವರೆಗೆ ಪ್ರತಿದಿನ ರಾತ್ರಿ 8:00 ಗಂಟೆಗೆ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ಪುರಾಣ ಕಾರ್ಯಕ್ರಮ 10:00 ಗಂಟೆಗೆ ಪುರಾಣ ಮಹಾ ಮಂಗಲ ಕಾರ್ಯಕ್ರಮ ಜರಗುವುದು.
ದಿನಾಂಕ – 02.05. 2025 ರಂದು ಬೆಳಿಗ್ಗೆ 9 ಗಂಟೆಗೆ
ಷ. ಬ್ರ. ಶ್ರೀ ಚಂದ್ರಗುಂಡ ಶಿವಾಚಾರ್ಯರು, ರಾಚೋಟೇಶ್ವರ ಮಠ ಹೊನ್ನಕಿರಣಿಗಿ ಇವರ ಸಾನಿಧ್ಯದಲ್ಲಿ ಹಾಗೂ ಷ. ಬ್ರ. ಶ್ರೀ ಬಸವಲಿಂಗ ಶಿವಾಚಾರ್ಯರು, ಇವರ ಘನ ಅಧ್ಯಕ್ಷತೆಯಲ್ಲಿ ಶ್ರೀ ರೇವಣಸಿದ್ದೇಶ್ವರ ಮೂರ್ತಿ ಹಾಗೂ ಅಕ್ಕಮಹಾದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಹೋಮ ಹವನದೊಂದಿಗೆ ನೆರವೇರುತ್ತದೆ ಮತ್ತು ರಾತ್ರಿ 8 ಗಂಟೆಗೆ ಧರ್ಮಸಭೆ ಕಾರ್ಯಕ್ರಮ ಜರಗುವುದು. ಹರ ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ಜರಗುವುದು ಮತ್ತು ರಾಜಕೀಯ ಗಣ್ಯ ಮಾನ್ಯರು ಭಾಗವಹಿಸುವವರು ಎಂದು ಶ್ರೀ ಮಠದ ಪರಮಪೂಜ್ಯರು ಷ. ಬ್ರ. ಶ್ರೀ ಬಸವಲಿಂಗ ಶಿವಾಚಾರ್ಯರರು ತಿಳಿಸಿದರು.
ಪುರಾಣಿಕರು :
ಶ್ರೀ. ವೇ. ಪಂ. ಶಿವಬಸಯ್ಯ ಶಾಸ್ತ್ರಿಗಳು ಕಳ್ಳಿಮಠ, ಚಿಣಮಗೇರಾ ಆಕಾಶವಾಣಿ ದೂರದರ್ಶನ ಕಲಾವಿದರು, ಗಾಯಕರು ಶ್ರೀ. ವೇ. ಆನಂದ ಗವಾಯಿಗಳು ಚಿ ಣಮಗೇರಾ, ತಬಲವಾದಕರು ಶ್ರೀ ಮಡಿವಾಳ ಚಿಂಚೋಳಿ ಇವರು ಭಾಗವಹಿಸುವವರು.
ಆದ್ದರಿಂದ ಸಮಸ್ತ ಸದ್ಬಕ್ತ ಮಂಡಳಿ ಸುಕ್ಷೇತ್ರ ಕೋಡ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.
ವರದಿ: ಚಂದ್ರಶೇಖರ್ ಆರ್ ಪಾಟೀಲ್
