ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೈತರಿಗೆ ಬೆದರಿಕೆ ಹಾಕಿ ಪುನಃ ಕ್ಷಮೆ ಕೇಳಿದ ತಹಶೀಲ್ದಾರರು

ಬೀದರ / ಬಸವಕಲ್ಯಾಣ : ಮೂಡಬಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗದುರಿ ಗ್ರಾಮದ ರೈತರ ಜಮೀನುಗಳಲ್ಲಿ ಮಂಗಗಳ ಕಾಟಕ್ಕೆ ಸುಮಾರು ಸಲ ಅರ್ಜಿ ಸಲ್ಲಿಸಿದರೂ ಕ್ಯಾರೆ ಎನ್ನದ ಅಧಿಕಾರಿಗಳು ರೈತರೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆಂದು ದಿನಾಂಕ 22/05/2025 ಗುರುವಾರ ದಂದು ಪುನಃ ಬಸವಕಲ್ಯಾಣ ತಹಶೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿದಾಗ ಅಲ್ಲಿನ ತಹಶೀಲ್ದಾರರು ರೈತರಿಗೆ ಪೊಲೀಸರನ್ನು ಕರೆಸುತ್ತೇನೆ ಎನ್ನುವ ಮೂಲಕ ಬೆದರಿಕೆ ಹಾಕಿದಾಗ ರೈತರು ದಂಡಾಧಿಕಾರಿಗಳ ವಿರುದ್ಧ ಘೋಷಣೆ ಕೂಗತೊಡಗಿದರು. ಆಗ ಅಲ್ಲಿನ ಸಹಾಯಕ ಆಯುಕ್ತರು ಬಂದು ರೈತರ ಸಮಸ್ಯೆ ಆಲಿಸಿ ತಕ್ಷಣವೇ ದಂಡಾಧಿಕಾರಿಗಳು ರೈತರನ್ನು ಕ್ಷಮೆ ಕೇಳಿ ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ ಮೇಲೆ ರೈತರು ಮತ್ತೊಮ್ಮೆ ದಂಡಾಧಿಕಾರಿಗಳಾದ ದತ್ತಾತ್ರಿ ಗಾಧಾ ರವರಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಸತ್ಯಾಗ್ರಹ ಅಂತ್ಯಗೊಳಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆ ಪಿ.ಎಸ್. ಐ. ಅಂಬರೀಷ್ ವಾಗ್ಮೊಡೆ, ಕ್ರೈಮ್ ಪಿ.ಎಸ್. ಐ. ಸುರೇಶ್ ಹಜ್ಜರ್ಗಿ ಸೇರಿದಂತೆ ಗ್ರಾಮದ ರೈತ ಮುಖಂಡರಾದ ಪ್ರಶಾಂತ ಬಿರಾದಾರ, ಈಶ್ವರ್ ಬಿರಾದಾರ , ಶಿವಾನಂದ ಬಿರಾದಾರ, ಸೂರ್ಯಕಾಂತ ಬಿರಾದಾರ, ಬಸಯ್ಯ ಸ್ವಾಮಿ, ಓಂಕಾರ್ ಬಿರಾದಾರ, ಪರಮೇಶ್ವರ್ ಬಿರಾದಾರ, ನಾರಾಯಣರಾವ್ ಬಿರಾದಾರ , ಜಿತೇಂದ್ರ ಮಂದಿರಾಕರ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ ಬಿರಾದಾರ, ಭೀಮಶಾ ಮಂದಿರಕರ್ ಸೇರಿದಂತೆ ಗ್ರಾಮದ ಇತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ