ವಿಜಯಪುರ/ಇಂಡಿ : ವಿಶ್ವ ಪರಿಸರ ದಿನವು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಜಾಗೃತಿಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 5 ರಂದು ಸ್ಮರಿಸುವ ಜಾಗತಿಕ ಕಾರ್ಯಕ್ರಮವಾಗಿದೆ ಈ ದಿನದಂದು, ಜಾಗತಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತಲು ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಅನೇಕ ಜನರು ಸೇರುತ್ತಾರೆ. ಅದೇ ರೀತಿಯಾಗಿ ಬಬಲಾದ ಗ್ರಾಮದ ಸಮಾಜಸೇವಕರಾದ ಪ್ರೀತು ದಶವಂತ ಅವರು ಇಂಡಿ ತಾಲೂಕಿನಲ್ಲಿ ಬರುವ ಹಳ್ಳಿಗಳಲ್ಲಿ ಪರಿಸರ ಹಾಳು ಮಾಡುವ ವ್ಯಕ್ತಿಗಳಿಗೆ ಬುದ್ಧಿ ಮಾತನ್ನು ಹೇಳಿದರು ಪರಿಸರವನ್ನು ನಾವು ಹಾಳು ಮಾಡಿದರೆ ನಮಗೆ ಶುದ್ಧವಾದ ಗಾಳಿಯನ್ನು ಸಿಗುವುದಿಲ್ಲ ನೀವು ಎಂದಿಗೂ ಪರಿಸರವನ್ನು ಹಾಳು ಮಾಡಬೇಡಿ ಪರಿಸರವನ್ನು ಬೆಳೆಸಿ ಎಂದು ತಿಳಿಸಿ ಹೇಳಿದರು.
ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಜಗತ್ತಿನಾದ್ಯಂತ ಸುಮಾರು 143 ದೇಶಗಳು ಈ ದಿನವನ್ನು ಆಚರಿಸುತ್ತವೆ ವಿಶ್ವ ಪರಿಸರ ದಿನವನ್ನು ವಿಶ್ವಸಂಸ್ಥೆಯು ಪರಿಸರದ ಮೇಲೆ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಥಾಪಿಸಿದೆ. 1974 ರಲ್ಲಿ, ಮೊದಲ ವಿಶ್ವ ಪರಿಸರ ದಿನವನ್ನು “ಒಂದೇ ಭೂಮಿ” ಎಂಬ ವಿಷಯದೊಂದಿಗೆ ನಡೆಸಲಾಯಿತು ಎಂದು ಮಾಧ್ಯಮದರ ಮುಂದೆ ವ್ಯಕ್ತಪಡಿಸಿದರು.
ವರದಿ. ಅರವಿಂದ್ ಕಾಂಬಳೆ
