ಗದಗ/ರೋಣ :ಕುರಡಗಿ ಗ್ರಾಮದ ಮುಸ್ಲಿಮ್ ಸಮಾಜದವರು ಪವಿತ್ರ ಬಕ್ರೀದ್ ಹಬ್ಬದ ಅಂಗವಾಗಿ
ಮಸ್ಜಿದ್ ಯಲ್ಲಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಮುಸ್ಲಿಂ ಬಾಂಧವರು ಪವಿತ್ರ ಬಕ್ರೀದ್ ಹಬ್ಬವನ್ನು ಮೌಲಾನ ಶಬ್ಬೀರ್ ಅಹ್ಮದ್ ಕಲ್ಮನಿ ಇವರ ನೇತೃತ್ವಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಬಕ್ರೀದ್ ಹಬ್ಬದ ದಿನವಾದ ಇಂದು ಮುಸ್ಲಿಂ ಬಾಂಧವರು ಶುಭ್ರ ಬಟ್ಟೆ ತೊಟ್ಟು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿ ಭೇದ ಭಾವ ಇಲ್ಲದೆ ಎಲ್ಲರೂ ಪರಸ್ಪರ ಹಬ್ಬವನ್ನು ಆಚರಿಸಿ ಶುಭಾಶಯಗಳು ಕೋರಿಕೊಂಡರು.
ಇಸ್ಲಾಂ ಆಚರಣೆಗಳು ಪಾಲಿಸಿದರೆ ಸಾಲದು ವರ್ಷದುದ್ದಕ್ಕೂ ಅವುಗಳನ್ನು ಪಾಲಿಸಿ ಸರ್ವಶಕ್ತ ಅಲ್ಲಾಹನ ಕೃಪೆಗೆ ಪಾತ್ರರಾಗಬೇಕು ಆಗ ನಮ್ಮ ಬದುಕು ಸಾರ್ಥಕ ಎಂದು ಮೌಲಾನ ಶಬ್ಬೀರ್ ಅಹ್ಮದ್ ಕಲ್ಮನಿಹೇಳಿದರು.
ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷರು ಹುಚ್ಚು ಸಾಬ್ ಗೂಗೇರಿ ಯವರು
ಮುಸ್ಲಿಂ ಬಾಂಧವರಿಗೆ ಶಾಂತಿ ಸಾಮರಸ್ಯ ಮತ್ತು ಪವಿತ್ರತೆಯ ತ್ಯಾಗ ಬಲಿದಾನ ಸಂಕೇತವಾಗಿರುವ ಬಕ್ರೀದ್ ಹಬ್ಬದ ಶುಭಾಶಯಗಳು ತಿಳಿಸಿದರು.
ಸಮುದಾಯದ ಜನರು ದಿನಾಂಕ 22/06/2025 ನೆ ರವಿವಾರ ನಡೆಯುವ ಮಸೀದಿಯ ಉದ್ಘಾಟನೆ ಮತ್ತು ಸಾಮೂಹಿಕ ವಿವಾಹಗಳ ಕಾರ್ಯಕ್ರಮಕ್ಕೆ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಬೇಕೆಂದು ಗ್ರಾಮ ಪಂಚಾಯತಿ ಸದಸ್ಯರಾದ ಜ .ಶೌಕತಅಲಿ ನದಾಫ್ ತಿಳಿಸಿದರು.
ಸಮಸ್ತ ಮುಸ್ಲಿಂ ಬಾ0ದವರು ಈದ್ ಉಲ್ ಅದಾ ಬಕ್ರೀದ್ ಹಬ್ಬದ ಪರಸ್ಪರ ಶುಭಾಶಯಗಳನ್ನು ಕೋರಿದರು.
- ಕರುನಾಡ ಕಂದ
