ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಆಚರಣೆ ವಿಜಯಪುರ ಜಿಲ್ಲೆ ತಾಳಿಕೋಟೆ ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಶನಿವಾರ ಅತ್ಯಂತ ಸಂಭ್ರಮ ಸಡಗರ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಪಟ್ಟಣದ ನೂತನ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಮುಖಂಡ ಡಾಕ್ಟರ್ ಮಿನಹಾಜುದ್ದೀನ ಖಾಜಿ ಅವರು ಈದ್ ಪ್ರವಚನವನ್ನು ನೀಡಿ ಬಕ್ರೀದ್ ಹಬ್ಬವು ಪ್ರವಾದಿ ಇಬ್ರಾಹೀಮ ಹಾಗೂ ಅವರ ಪುತ್ರ ಇಸ್ಮಾಯಿಲ್ ಅವರು ದೇವನ ಸಂಪ್ರೀತಿಗಾಗಿ ತೋರಿದ ತ್ಯಾಗವನ್ನು ಸ್ಮರಿಸುವ ದಿನವಾಗಿದೆ ಎಂದರು. ಧಾರ್ಮಿಕ ಮುಖಂಡ ಸೈಯದ್ ಶಕಿಲ್ ಅಹಮದ್ ಖಾಜಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಸಾಮೂಹಿಕ ಪ್ರಾರ್ಥನೆಯ ನಂತರ ಪರಸ್ಪರ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಮಾಜದ ಗಣ್ಯರಾದ ಖಾಜಾಹುಸೇನ ಡೋಣಿ, ಗನಿಸಾಬ ಲಾಹೋರಿ, ಅಬ್ದುಲ್ ರೆಹಮಾನ ಎಕೀನ, ಮಾಶಾಕ್ ಚೋರಗಸ್ತಿ, ಮೆಹಬೂಬ್ ಕೆಂಭಾವಿ, ತನ್ವೀರ್ ಮನಗೂಳಿ, ಅಬ್ದುಲ್ ರಜಾಕ್ ಮನಗೂಳಿ, ಅಲ್ಲಾಭಕ್ಷ ನಮಾಜಕಟ್ಟಿ, ಸೈಯದ್ ಫಸಿ ಯುದ್ಧೀನ ಖಾಜಿ, ಎಂ.ಕೆ.ಚೋರಗಸ್ತಿ, ಅಬ್ದುಲರೆಹಮಾನ್ ನಮಾಜಕಟ್ಟಿ, ಫಯಾಜುದ್ದೀನ ಖಾಜಿ, ಮುರ್ತುಜಾ ಮೇತ್ರಿ, ಸಿಕಂದರ ವಠಾರ, ಖಾಜಾಹುಸೇನ ಸಗರ, ಈದ್ಗಾ ಸಮಿತಿ ಪದಾಧಿಕಾರಿಗಳು, ಸಮಾಜದ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.
ವರದಿ ನಜೀರ್ ಚೋರಗಸ್ತಿ
