ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಕ್ರೀದ್ ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಬಳ್ಳಾರಿ / ಕುರುಗೋಡು : ಬಕ್ರೀದ್ ಹಬ್ಬದ ನಿಮಿತ್ಯ ಪಟ್ಟಣದಲ್ಲಿ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ವಾಮಿ ವಿವೇಕಾನಂದ ರಕ್ತ ಭಂಡಾರ ಹಾಗೂ ತಾಲೂಕು ಪಂಚಾಯತ್ – ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಮತ್ತು ಸಮುದಾಯ ಆರೋಗ್ಯ ಕೇಂದ್ರ ರಕ್ತ ಶೇಖರಣಾ ಘಟಕದ ಸಹಯೋಗದಲ್ಲಿ
ಶನಿವಾರದಂದು ಬೆಳಿಗ್ಗೆ 08:00 ಗಂಟೆಯಿಂದ ಸಂಜೆ 4:00 ವರೆಗೆ ಕುರುಗೋಡನ ಈದ್ಗಾ ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಬಕ್ರೀದ್ ಹಬ್ಬದ ಪ್ರಯುಕ್ತ ಈ ದಿನ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅಕ್ಬರ್ ಷಾ ಸುನ್ನಿ ಜಾಮೀಯ ಮಜೀದ್ ಮತ್ತು ಮದೀನಾ ಮಜೀದ್ ಹಾಗೂ ಸುತ್ತಮುತ್ತಲಿನ ಗ್ರಾಮದ ಮಜೀದ್ ಬಾಂಧವರು ಹಾಜರಿದ್ದು ಸ್ವಯಂ ಪ್ರೇರಿತವಾಗಿ ಭಾಗವಹಿಸುವ ಮುಖಾಂತರ ನೆರವು ಮಾಡಿಕೊಟ್ಟರು. ಮುಸ್ಲಿಂ ಸಮಾಜದ ಮುಖಂಡ ಅಲ್ಲಾಭಕ್ಷಿ ಮಾತನಾಡಿ ಸಮಸ್ತರು ಮತ್ತು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮದ ಯುವಕರು ರಕ್ತದಾನ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಲ್ಲರಿಗೂ ಆ ಅಲ್ಲಾಹ… ಆಯುಷ್ಯ ಆರೋಗ್ಯ ವೃದ್ಧಿ ಮಾಡಲಿ ಎಂದರು.

ಸಿರುಗುಪ್ಪ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ ಖಾಸಿಂ ಮಾತನಾಡಿ ರಕ್ತದಾನದಿಂದ ಅನೇಕ ರೋಗಗಳನ್ನು ದೂರ ಮಾಡಬಹುದು, ರಕ್ತದಾನದ ಅವಶ್ಯಕತೆ ಗರ್ಭಿಣಿಯರಿಗೆ ಆಕಸ್ಮಿಕ ಅಪಘಾತ ಪ್ರಕರಣಗಳಿಗೆ ಸಣ್ಣ ಮಕ್ಕಳಿಗೆ ರೋಗಿಗಳಿಗೆ ಇದರ ಅವಶ್ಯಕತೆ ಹೆಚ್ಚಿದೆ.
ರಕ್ತಕ್ಕೆ ಇನ್ನೊಂದು ಪರ್ಯಾಯ ವಸ್ತುವಿಲ್ಲ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡಿರಿ ಎಂದು ಮನವೊಲಿಸಿದರು.

ಈ ಸಂದರ್ಭದಲ್ಲಿ ಕೆ.ಎಸ್. ಖಾದರ್ ಭಾಷಾ, ಮುಲ್ಲಾರ್ ಹನೀಫ್ ಸಾಬ್, ಟ್ರ್ಯಾಕ್ಟರ್ ನಬಿಸಾಬ್, ಹಾಜಿ ಖಾಸಿಂ ಸಾಬ್, ಖಾಜಿ ಬಶೀರ್ ಸಾಬ್, ಸಿದ್ದಿ ಸಾಬ್, ಅಬ್ದುಲ್ ಸಾಬ್, ಅಹಮ್ಮದ್ ಭಾಷಾ, ಹಾಫೀಜ್ ರಿಯಾಜ್ ಸಾಬ್, ಅಕ್ಬರ್ ಷಾ ಮಜಿದ್ ಹಾಫೀಜ್ ಸಾಬ್, ಖಾಜಾವಲಿ, ಶೇಕ್ಷಾವಲಿ, ಸುಲೇಮಾನ್, ಅಲಿಸಾಬ್ ಖಾಜಾ ಹುಸೇನ್, ಹುಚ್ಚು ಸಾಬ್, ಮಾಬುಸಾಬ್ ಮಸ್ತಾನ್, ಅಬ್ದುಲ್ ರಹಮಾನ್, ಶರೀಫ್ ಮೌಲಾಲಿ, ಅಕ್ಬರ್ ಷಾ, ಸುನ್ನಿ ಜಾಮಿಯ ಮಜೀದ್ ಮತ್ತು ಮದೀನಾ ಜಾಮಿಯ ಮಜೀದ್ , ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ವತಿಯಿಂದ ಪ್ರಭಾರಿ ತಾಲೂಕು ಆರೋಗ್ಯ ಅಧಿಕಾರಿಗಳು ಮತ್ತು ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಮಂಜುನಾಥ ಜವಳಿ,
ಐಸಿಟಿಸಿ ಆಪ್ತ ಸಮಾಲೋಚಕರಾದ ಎನ್. ಕರಿಬಸವ , ಬ್ಲಡ್ ಬ್ಯಾಂಕ್ ಸ್ಟೋರೇಜ್‌ನ ಲ್ಯಾಬ್ ಟೆಕ್ನಿಷಿಯನ್ ಆದ ಶ್ರುತಿ ಬಿ, ನೇತ್ರಾವತಿ, ಏಚ್ಐಒ ಮಹೇಂದ್ರ, ಶರಣ, ಬಸವರಾಜ್,ಹದಿಹರೆಯದವರ ಆಪ್ತ ಸಮಾಲೋಚಕರಾದ ಮಹಬೂಬ್ ಭಾಷಾ, ಡಿ ಗ್ರೂಪ್ ಸಿಬ್ಬಂದಿಯಾದ ಓಬಳೇಶ್, ರಮೇಶ್, ಮುಂತಾದವರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮಜೀದ್ ದಿಂದ ಸಮಸ್ತ ಮುಸ್ಲಿಂ ಬಾಂಧವರು ಸುತ್ತಮುತ್ತಲಿನ ಗ್ರಾಮದ ಯುವಕರು, ಮಹಿಳೆಯರು, ಊರಿನ ಮುಖಂಡರು ಹಾಜರಿದ್ದರು.

ಶಿಬಿರದಲ್ಲಿ 80 ಕ್ಕೂ ಹೆಚ್ಚು ಜನ ಸ್ವಯಂ ಪ್ರೇರಿತ ರಕ್ತದಾನದಿಂದ 19 ಯೂನಿಟ್ ಗಳ ರಕ್ತ ಸಂಗ್ರಹಣೆಯಾಯಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ