ಬಳ್ಳಾರಿ / ಕುರುಗೋಡು : ಇಂದು ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧೆ ಭಕ್ತಿಯಿಂದ ಆಚರಿಸಿದರು.
ಮುಂಜಾನೆಯೇ ನಗರದ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಾದ ಖಾಝಿ ಬಶೀರ್ ಸಾಬ್ ಹಬ್ಬದ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೆ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಪ್ರಾರ್ಥನೆಯ ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಇನ್ನು ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳು ಕೂಡ ಭಾಗಿಯಾಗಿ ನಮಾಜ್ ಮಾಡಿದರು. ಬಕ್ರೀದ್ ಹಬ್ಬದ ಹಿನ್ನೆಲೆ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು.
ಈ ಸಂದರ್ಭದಲ್ಲಿ ಕೆ.ಎಸ್. ಖಾದರ್ ಭಾಷಾ, ಮುಲ್ಲಾರ್ ಹನೀಫ್ ಸಾಬ್, ಟ್ರ್ಯಾಕ್ಟರ್ ನಬಿಸಾಬ್, ಹಾಜಿ ಖಾಸಿಂ ಸಾಬ್, ಖಾಜಿ ಬಶೀರ್ ಸಾಬ್, ಸಿದ್ದಿ ಸಾಬ್, ಅಬ್ದುಲ್ ಸಾಬ್, ಅಹಮ್ಮದ್ ಭಾಷಾ, ಹಾಫೀಜ್ ರಿಯಾಜ್ ಸಾಬ್, ಅಕ್ಬರ್ ಷಾ ಮಜಿದ್ ಹಾಫೀಜ್ ಸಾಬ್, ಖಾಜಾವಲಿ, ಶೇಕ್ಷಾವಲಿ, ಸುಲೇಮಾನ್,
ಅಲಿಸಾಬ್ ಖಾಜಾ ಹುಸೇನ್, ಹುಚ್ಚು ಸಾಬ್, ಮಾಬುಸಾಬ್ ಮಸ್ತಾನ್, ಅಬ್ದುಲ್ ರಹಮಾನ್, ಶರೀಫ್ ಮೌಲಾಲಿ, ಅಕ್ಬರ್ ಷಾ, ಸುನ್ನಿ ಜಾಮಿಯ ಮಜೀದ್ ಮತ್ತು ಮದೀನಾ ಜಾಮಿಯ ಮಜೀದ್, ಮಹಬೂಬ್ ಭಾಷಾ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮಜೀದ್ ದಿಂದ ಸಮಸ್ತ ಮುಸ್ಲಿಂ ಬಾಂಧವರು ಸುತ್ತಮುತ್ತಲಿನ ಗ್ರಾಮದ ಯುವಕರು, ಊರಿನ ಮುಖಂಡರು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
