ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತೆರೆಮರೆಯಲ್ಲಿ ಒಂದು ಫೌಂಡೇಶನ್

ಭಾರತವು ಸಂಸ್ಕೃತಿ ಆಚಾರ ವಿಚಾರಗಳಿಗೆ ಹೆಸರುವಾಸಿ. ಈ ಭೂಮಿಯ ಗುಣವೇ ಅಂತದ್ದು ಎಲ್ಲವೂ ಎಲ್ಲರಿಗಾಗಿ ಎನ್ನುವುದು. ಆಸೆಯ ಜೊತೆಗೆ ನಿಸ್ವಾರ್ಥ, ಭಾವನೆಗಳ ಜೊತೆಗೆ ಹೃದಯ, ಬದುಕಿನೊಂದಿಗೆ ಸಂಬಂಧ ಬೆಸೆಯುವಂತೆ ಅಲ್ಲಲ್ಲಿ ಸಾಮಾಜಿಕ ಬಂಧಗಳು ರೂಪುಗೊಳ್ಳುತ್ತವೆ.
ಮಾನವ ಸಂಘಜೀವಿ, ಸಮಾಜದ ಜೀವಿ ಎನ್ನುವುದು ತಿಳಿದಿರುವ ವಿಚಾರ. ಬದುಕುವುದರೊಂದಿಗೆ ಒಂದಿಷ್ಟು ಹೆಜ್ಜೆಗಳನ್ನು ಕೂಡಾ ಶಾಶ್ವತಗೊಳಿಸುವುದು ಅವನ ಅಂತಿಮ ಪಯಣವಾಗಬೇಕು. ಈ ನಿಟ್ಟಿನಲ್ಲಿ ಹಲವು ಜನ ಮಹನೀಯರು, ಟ್ರಸ್ಟ್ ಗಳು, ಸಂಘಗಳು, ಬಳಗಗಳು, ಸಮಿತಿಗಳು ಮತ್ತು ಫೌಂಡೇಶನ್ ಗಳು ಕೆಲಸ ಮಾಡುತ್ತಿರುವುದನ್ನು ನಾವೆಲ್ಲಾ ಸಹಜವಾಗಿ ಗಮನಿಸಿದ್ದೇವೆ. ಕೆಲವೊಂದು ಎಲ್ಲೆಡೆ ವ್ಯಾಪಕವಾಗಿ ಹಬ್ಬಿದ್ದರೆ ಇನ್ನೂ ಕೆಲವೊಂದು ತೆರೆಮರೆಯಲ್ಲಿ ತನ್ನ ಕಾಯಕವನ್ನು ಮುಂದುವರೆಸಿರುವುದನ್ನು ನಾವು ಕಾಣಬಹುದು. ಅಂತಹ ಫೌಂಡೇಶನ್ ಗಳಲ್ಲಿ ನಗು ಫೌಂಡೇಶನ್ ಕೂಡ ಒಂದು.
ಹೆಸರಿಗೆ ತಕ್ಕಂತೆ ನಗುವನ್ನು ಹೊತ್ತು ಸುಮಾರು ಹತ್ತು ವರ್ಷಗಳಿಂದ ರಾಜ್ಯದ ಮೂಲೆ ಮೂಲೆ ತಲುಪಿ ಶೈಕ್ಷಣಿಕ ಅಭಿವೃದ್ಧಿ ಮತ್ತು ಸರ್ಕಾರಿ ಶಾಲೆಗಳ ಉಳಿವಿಗೆ ಕೈಜೋಡಿಸಿರುವ ಸಂಸ್ಥೆಗಳಲ್ಲಿ ನಗು ಫೌಂಡೇಶನ್ ಪ್ರಮುಖ ಪಾತ್ರ ವಹಿಸುತ್ತದೆ. ಮೂಲತ: ಬಳ್ಳಾರಿಯವರಾದ ಶೇಷಾದ್ರಿ ಅವರು ಇದರ ಪ್ರಸ್ತುತ ಅಧ್ಯಕ್ಷರಾಗಿದ್ದು ಇದರ ಕಚೇರಿ ಬೆಂಗಳೂರಿನಲ್ಲಿದೆ.
ಈ ಫೌಂಡೇಶನ್ ನ ಸಮಗ್ರ ಕಾರ್ಯ ಚಟುವಟಿಕೆಗಳನ್ನು ನಿರ್ವಹಣೆ ಮಾಡುವವರು ಮತ್ತು ರಾಜ್ಯದ ಎಲ್ಲಾ ಭಾಗಗಳಿಗೆ ತಲುಪುವಂತೆ ನೋಡಿಕೊಳುತ್ತಿರುವ ಶಕ್ತಿಯೇ ದೀಪ್ತಿ ಶೇಷಾದ್ರಿಯವರು. ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ದಾನ ಧರ್ಮ ಮಾಡುವ ಗುಣ ವಂಶದ ಬಳುವಳಿಯಾಗಿ ಬಂದಿದೆ. ಕಾಲೇಜಿನ ದಿನಗಳಿಂದಲೇ ಸಾಮಾಜಿಕ ಕಾರ್ಯ ಮಾಡ ಹೊರಟ ಇವರು ಇಂದಿಗೂ ನಾಗಾಲೋಟದಂತೆ ಸಾಮಾಜಿಕ ಕಾರ್ಯ ಮುಂದುವರಿಸಿದ್ದಾರೆ. ಇವರಿಗೆ ಬೆನ್ನೆಲುಬಾಗಿ ನಿಂತಿರುವುದು ನಗು ಫೌಂಡೇಶನ್ ಮತ್ತು ವಿವಿಧ ಕಂಪನಿಗಳ ಸಹಯೋಗ. ಹಲವು ಕಂಪನಿಗಳಿಗೆ ವಿವಿಧ ಬೇಡಿಕೆ ಸಲ್ಲಿಸಿ, ಸಿ ಎಸ್ ಆರ್ ಫಂಡ್ ಪಡೆದು ರಾಜ್ಯದ ಕುಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ ಪ್ರಾಮಾಣಿಕವಾಗಿ ತಲುಪಿಸಿದ್ದಾರೆ.
ಇವರ ಫೌಂಡೇಶನ್ ಹೆಚ್ಚಿನ ಆದ್ಯತೆ ನೀಡುವುದು ಪ್ಲಾಸ್ಟಿಕ್ ಮರುಬಳಕೆಗೆ. ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಯಾರಿಂದಲೂ ಸಾಧ್ಯವಾಗದಿದ್ದರೂ ಆ ನಿಟ್ಟಿನಲ್ಲಿ ಇವರು ಕಾರ್ಯನಿರ್ವಹಿಸುತ್ತಿರುವ ಶ್ಲಾಘನೀಯ. ಇದರಡಿಯಲ್ಲಿ ಈಗಾಗಲೇ ಸಾಕಷ್ಟು ಕೆಲಸ ಮಾಡಿದೆ. ಪ್ಲಾಸ್ಟಿಕ್ ಮರುಬಳಕೆಯ ಡೆಸ್ಕ್, ಪೇಪರ್ ಪೆನ್ಸಿಲ್, ಕಾಟನ್ ಸ್ಯಾನಿಟರಿ ಪ್ಯಾಡ್, ಹಾಳಾದ ಜಿನ್ಸ್ ನಿಂದ ತಯಾರಾದ ಬ್ಯಾಗ್ ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಿದೆ. ಅವರ ಕೆಲಸಗಳನ್ನು ಪಟ್ಟಿ ಮಾಡುತ್ತಾ ಸಾಗಿದರೆ ಹಾಳೆಗಳು ಮುಗಿಯುವುದು ಹೊರತು ಕೆಲಸಗಳು ಮುಗಿಯುವುದಿಲ್ಲ.
ರಾಜ್ಯದ ಎಲ್ಲಾ ಜಿಲ್ಲೆಗಳ ಮೂಲೆ ಮೂಲೆಯನ್ನು ಫೌಂಡೇಶನ್ ತಲುಪಿರುವುದು ಶ್ಲಾಘನೀಯ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಷ್ಟೇ ಸೀಮಿತವಾಗದೆ ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಹೃದಯವಂತರ ಕಪಾಟು ಎನ್ನುವ ಅಲ್ಮೆರಾ ಸ್ಥಾಪಿಸಿ ಅವಶ್ಯಕತೆ ಇಲ್ಲದವರಿಗೆ ಅದು ಬೇಡವಾಗಿದ್ದರೆ, ಅವಶ್ಯಕತೆ ಇರುವವರಿಗೆ ತಲುಪಿಸಲು ಇರುವ ಕಪಾಟು. ಅದೇ ರೀತಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಕೋವಿಡ್ ಸಂದರ್ಭದಲ್ಲಿ ಆಹಾರ ಕಿಟ್ ಮತ್ತು ಮಾಸ್ಕ್ ವಿತರಣೆ ಮಾಡಿರುವುದು ಹಲವು ನಿದರ್ಶನಗಳಿವೆ. ಅಷ್ಟೇ ಅಲ್ಲದೆ ಮಹಿಳೆಯರಿಗೆ ಟೈಲರಿಂಗ್ ತರಬೇತಿ ಕೊಡಿಸುವುದು, ವೃದ್ದಾಶ್ರಮಗಳ ಅವಶ್ಯಕತೆ ಪೂರೈಸುವುದು ಹೀಗೆ ಹತ್ತಾರು ಕೆಲಸ ನಿರ್ವಹಿಸುತ್ತ ಬಂದಿರುವುದು ಮೆಚ್ಚುವ ಕೆಲಸ. ಸರ್ಕಾರಿ ಶಾಲೆಗಳಿಗಂತೂ ಲೆಕ್ಕವಿಲ್ಲದಷ್ಟು ಖರ್ಚು ಮಾಡಿದ್ದಾರೆ. ಮಕ್ಕಳೇ ಸರ್ವಸ್ವ ಎನ್ನುವ ಇವರ ಹಂಬಲವನ್ನು ಎಷ್ಟು ಹೊಗಳಿದರೂ ಸಾಲದು. ಪ್ರತಿಕ್ಷಣ ಮಕ್ಕಳಿಗೆ ಏನು ಕೊಡಬೇಕು ಅದರ ಸಾಧಕ ಬಾಧಕ ಏನು ಎನ್ನುವುದರ ಆಲೋಚನೆಯೇ ಇರುತ್ತದೆ. ಸಾವಿರ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣ ಎಂದರೆ ತಪ್ಪಾಗಲಾರದು. ಮಧ್ಯದಲ್ಲಿ ಶಾಲೆ ತೊರೆಯಬಾರದು ಎನ್ನುವ ಕಾರಣಕ್ಕೆ ಅವರ ಕಾಲೇಜು ಶುಲ್ಕವನ್ನು ಕಟ್ಟಿ ಸಾಕಷ್ಟು ಮಕ್ಕಳನ್ನು ಓದಿಸಿದ್ದಾರೆ ಓದಿಸುತ್ತಿದ್ದಾರೆ ಒಟ್ಟಾರೆಯಾಗಿ ನಗು ಫೌಂಡೇಶನ್ ಎಲ್ಲವನ್ನು ಸಕಾಲಕ್ಕೆ ನೀಡುವ ಕಾಮಧೇನು ಎಂದರೆ ತಪ್ಪಾಗಲಾರದು.
ಆಡು ಮುಟ್ಟದ ಸೊಪ್ಪಿಲ್ಲ ನಗು ಫೌಂಡೇಶನ್ ಮಾಡದ ಕೆಲಸ ಉಳಿದಿಲ್ಲ ಎನ್ನುವಂತೆ ಯಾವ ಕ್ಷೇತ್ರವನ್ನು ಬಿಡದೆ ಎಲ್ಲಾ ಕ್ಷೇತ್ರಗಳ ಮೇಲೆ ಕೆಲಸ ನಿರ್ವಹಿಸಿದೆ. ಅಂತಹ ಕೆಲವೊಂದು ಕ್ಷೇತ್ರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1.ಪ್ಲಾಸ್ಟಿಕ್ ಮರುಬಳಕೆ

  1. ಲ್ಯಾಪ್ ಟಾಪ್ ವಿತರಣೆ
  2. ಫುಡ್ ಕಿಟ್ ಮತ್ತು ಮಾಸ್ಕ್ ವಿತರಣೆ.
  3. ಶೌಚಾಲಯ ನಿರ್ಮಾಣ ಮತ್ತು ದುರಸ್ತಿ
    5.ಕುಡಿಯುವ ನೀರಿನ ವ್ಯವಸ್ಥೆ
  4. ಬಿಸಿಯೂಟ ಸಾಮಗ್ರಿಗಳು
    7.ಸೋಲಾರ್ ಲ್ಯಾಂಪ್ (SSLC ಮಕ್ಕಳಿಗೆ )
  5. ವಿದ್ಯಾರ್ಥಿ ವೇತನ
  6. ಅತಿಥಿ ಶಿಕ್ಷಕರಿಗೆ ಸಂಬಳ
    10.ಪ್ರತಿಭಾ ಪುರಸ್ಕಾರ
    11.ಪ್ರಿಂಟರ್
  7. ಸ್ಯಾನಿಟರಿ ಪ್ಯಾಡ್
    13.ಅಲ್ಮೇರಾ
  8. ಕಲಿಕಾ ಸಾಮಗ್ರಿಗಳು
  9. ಕ್ರೀಡಾ ಸಾಮಗ್ರಿಗಳು
    16.ಪೌಷ್ಟಿಕ ಆಹಾರ
    17.ಇಂಗ್ಲಿಷ್ ಟಿ ಎಲ್ಎಂ
    18.ಪಾಸಿಂಗ್ ಪ್ಯಾಕೇಜ್ (SSLC ಮಕ್ಕಳಿಗೆ )
  10. ಸ್ವೆಟರ್
  11. ENK ಬ್ಯಾನರ್
  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ