ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮನುಷ್ಯರ ನಡುವೆ ಪ್ರೀತಿ ವಿಶ್ವಾಸ ಬೆಳೆಯಲಿ: ಆಮಿರ್ ಅಶ್ಅರೀ ಬನ್ನೂರು

ಕೊಪ್ಪಳ/ಯಲಬುರ್ಗಾ : ತಾಲ್ಲೂಕಿನ ಮುಧೋಳ ಗ್ರಾಮದ ಮುಸ್ಲಿಂ ಬಾಂಧವರು ತ್ಯಾಗ ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಧರ್ಮಗಳು ಮನುಷ್ಯನಿಗೆ ನೈತಿಕ ಬೋಧನೆಗಳನ್ನು ನೀಡಿದೆ,
ಅದನ್ನು ಅಳವಡಿಸಿಕೊಂಡು ಬದುಕುವುದು ಧರ್ಮ ವಿಶ್ವಾಸಿಯ ಆದ್ಯತೆ ಮತ್ತು ಬಾಧ್ಯತೆಯಾಗಿದೆ. ಬಕ್ರೀದ್ ಪರಸ್ಪರ ಪ್ರೀತಿಸಲು, ಕಷ್ಟದಲ್ಲಿದ್ದವರ ನೋವುಗಳಲ್ಲಿ ಭಾಗಿಯಾಗಲು ಕಲಿಸುತ್ತಿದೆ. ಎಲ್ಲಾ ಧರ್ಮಗಳ ಹಬ್ಬಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಗಟ್ಟಿಯಾಗಿ ಬೇರೂರಬೇಕು, ಪ್ರೀತಿ ವಿಶ್ವಾಸದಿಂದ ಬೆಳೆಯುವ ಭಾವನೆ ಎಲ್ಲರದ್ದಾಗಬೇಕು, ಬಕ್ರೀದ್ ಅಲ್ಲಾಹನ ಇಷ್ಟದಾಸರ ಸ್ಮರಣೆಯಾಗಿದೆ, ಕುರ್ಬಾನಿ ಅಥವಾ ಇತರ ರೀತಿಯಲ್ಲಿ ಸಹಾಯಗಳನ್ನು ಮಾಡುವುದು ಬಕ್ರೀದಿನ ಪರಿಪೂರ್ಣತೆಯಾಗಿದೆ. ಇಸ್ಲಾಮಿನ ಹಬ್ಬಗಳು ಆರಾಧನೆ ಜೊತೆಗೆ ಭಾತೃತ್ವವನ್ನು ಬೆಳೆಸಲು ಕಲಿಸುತ್ತಿದೆ ಎಂದು ಮುಧೋಳ ಇಮಾಂ ಹಝ್ರತ್ ಆಮಿರ್ ಅಶ್ಅರೀ ಬನ್ನೂರು ಬಕ್ರೀದ್ ಸಂದೇಶ ನೀಡಿ ಮಾತನಾಡಿದರು. ಯಲಬುರ್ಗಾ ತಾಲೂಕು ಸಂಯುಕ್ತ ಖಾಝಿ ಹಝ್ರತ್ ಅಬ್ದುಲ್ ಖಾದರ್ ಖಾಝಿ ದುವಾ ಆಶೀರ್ವಚನ ನಡೆಸಿದರು.

ಈ ಸಂದರ್ಭದಲ್ಲಿ ಊರಿನ ಹಿರಿಯರು, ಮುಖಂಡರು ಹಾಗೂ ಯುವಕರು ಮತ್ತು ಮಕ್ಕಳು ಭಾಗವಹಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ