ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಮಲಿಂಗಯ್ಯ ಶ್ರೀಗಳಿಗೆ “ನೋಬೆಲ್ ಕನ್ನಡಿಗ” ಪ್ರಶಸ್ತಿ ಪ್ರದಾನ

ವಿಜಯಪುರ/ ತಾಳಿಕೋಟೆ: ತಾಲೂಕಿನ ಚಬನೂರ ಗ್ರಾಮ ಹಿರೇಮಠದ ಪೀಠಾಧಿಪತಿ, ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರಾದ ಜ್ಯೋತಿಷ್ಯ ರತ್ನ ಪೂಜ್ಯ ರಾಮಲಿಂಗಯ್ಯ ಮಹಾಸ್ವಾಮಿಗಳಿಗೆ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಬೆಂಗಳೂರು ಇವರು ಕೊಡ ಮಾಡುವ 2025 ನೇ ಸಾಲಿನ “ನೊಬೆಲ್ ಕನ್ನಡಿಗ” ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗಿದೆ. ಬೆಂಗಳೂರಿನ ನಯನ ಸಭಾಂಗಣ ಕನ್ನಡ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಜೂನ್ 7ರಂದು ಹಮ್ಮಿಕೊಂಡ “ಬುದ್ಧ ಬಸವ ಮತ್ತು ಅಂಬೇಡ್ಕರ್ ಜಯಂತಿ ಹಾಗೂ ಸಮಾಜದ ಕುರಿತು ವಿಚಾರ ಸಂಕಿರಣ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ” ಸಮಾರಂಭದಲ್ಲಿ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗಡೆ ಅವರು ರಾಜ್ಯದ ಗೌರವಾನ್ವಿತ ಸ್ವಾಮೀಜಿಗಳು ಹಾಗೂ ಸಾಹಿತಿಗಳ ಸಮ್ಮುಖದಲ್ಲಿ ಪೂಜ್ಯ ರಾಮಲಿಂಗಯ್ಯ ಶ್ರೀಗಳಿಗೆ “ನೊಬೆಲ್ ಕನ್ನಡಿಗ” ಅಂತರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಲಿಂಗಯ್ಯ ಶ್ರೀಗಳು ಯಾರು ಸಮಾಜಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೋ ಅಂಥವರು ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ನಮ್ಮ ಬದುಕು ಸದಾ ನಿಸ್ವಾರ್ಥದ ಬದುಕಾಗಿರಬೇಕು, ನಮಗಾಗಿ ಬದುಕುವುದು ಮುಖ್ಯವಲ್ಲ ಸಮಾಜದ ಹಿತಕ್ಕಾಗಿ ಬದುಕುವಂಥವರಾಗಬೇಕು. ಈ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗುಣವಂತ ಮಂಜು ಅವರ ಸಮಾಜಮುಖಿ ಕಾಳಜಿ ನಿಜಕ್ಕೂ ಮೆಚ್ಚುವಂತದ್ದು ಅವರಿಗೆ ನಾವೆಲ್ಲರೂ ಸಹಕರಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದರು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೋವಿಂದರಾಜ ನಗರ ಶಾಸಕ ಪ್ರಿಯಾಕೃಷ್ಣ, ಬಿಜೆಪಿ ಮುಖಂಡ ಅಂಬರೀಶಗೌಡ, ಕಿರು ತೆರೆ ನಟಿ ದೀಪಿಕಾದಾಸ್, ಖ್ಯಾತ ಮನೋವೈದ್ಯ ಡಾ.ಸಂತೋಷ್ ಕುಮಾರ ಎಂ. ಸಹಕಾರಿ ಧುರೀಣ ಡಾ.ಬಿ.ಡಿ.ಭೂಕಾಂತ, ಡಾ.ಸಂಕಲ್ಪ ನರಸಿಂಹಮೂರ್ತಿ, ಡಾ.ಭ್ರಮರ ಶಿವಶಂಕರ, ಸಮಾಜಸೇವಕಿ ಡಾ.ಗಾಯತ್ರಿ ರುದ್ರೇಶ, ಪ್ರಗತಿಪರ ರೈತ ಡಾ.ದಯಾನಂದ ಮೂರ್ತಿ, ಜಲ ದಾಸೋಹಿ ಡಾ.ಜಯರಾಮ್, ಪ್ರತಿಷ್ಠಾನದ ಅಧ್ಯಕ್ಷ ಡಾ.ಗುಣವಂತ ಮಂಜು, ಪದಾಧಿಕಾರಿಗಳು ಹಾಗೂ ಗಣ್ಯರು ಇದ್ದರು.

ವರದಿ : ನಜೀರ್ ಚೋರಗಸ್ತಿ, ತಾಳಿಕೋಟೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ