ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ಭಾನುವಾರ ಪ. ಪೂ . ರಾಷ್ಟ್ರ ಸಂತ ಆಚಾರ್ಯ ಶ್ರೀ 108 ಗುಣದರನಂದಿ ಮುನಿಮಹಾರಾಜರ ಸಾನಿಧ್ಯದಲ್ಲಿ ಐನಾಪುರದಲ್ಲಿ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ರಾಷ್ಟ್ರ ಸಂತ ಗುಣಧರನಂದಿ ಮುನಿ ಮಹಾರಾಜರು ಮಾತನಾಡಿ ಜೈನ ಸಮಾಜದ ಸ್ವತಂತ್ರ ನಿಗಮ ಮಂಡಳ ಸ್ಥಾಪನೆ ಮಾಡಬೇಕೆಂದರು. ಜೈನ್ ಸಮಾಜದ ತೀರ್ಥಕ್ಷೇತ್ರ ಶ್ರೀ ಸಂವೇದ ಶಿಖರಜಿ ದೇವರ ದರ್ಶನಕ್ಕಾಗಿ ಮಹಿಳೆಯರಿಗಾಗಿ ವಿಶೇಷ ಸೌಲಭ್ಯ ನೀಡಬೇಕು, ನಮ್ಮಸಮಾಜದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಬೇಕು ಎಂದು ಒತ್ತಾಯಿಸಿದರು.
ಈ ಕಾರ್ಯಕ್ರಮವು ಘನತೆವೆತ್ತ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ನಿಗಮ ಮಂಡಳಿ ಮಾಡಬೇಕು ಎಂದು ಗುಣದರನಂದಿ ಮುನಿಮಹಾರಾಜರು ಪತ್ರ ನೀಡಿದ್ದಾರೆ ಎಂದು ಹೇಳಿದರು.
ಮತ್ತು ಇದೇ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ್ ಸವದಿ ಅವರು ನ್ಯಾಯ ಸಮ್ಮತವಾಗಿರುವ ಸೌಲತ್ತುಗಳು ರಾಜ್ಯ ಸರ್ಕಾರದಿಂದ, ಕೇಂದ್ರ ಸರ್ಕಾರದಿಂದ ಸಿಗಬೇಕಾದಂತಹ ಉದ್ದೇಶವನ್ನು ಇಟ್ಟುಕೊಂಡು ಈ ಎರಡು ಸರಕಾರದ ಗಮನವನ್ನು ಸೆಳೆಯುವುದಕ್ಕೆ ಈ ಬೃಹತ್ ಸಮಾವೇಶಯನ್ನು ಆಯೋಜನೆ ಮಾಡಿದ್ದೀರಿ.
ಜೈನ ಸಮುದಾಯವು ಒಂದು ದೊಡ್ಡ ಪ್ರಮಾಣದಲ್ಲಿ ಇದ್ದರೂ ಕೂಡ ಅದಕ್ಕೆ ತನ್ನದೇ ಆಗಿರತಕ್ಕಂತಹ ಒಂದು ಸವಲತ್ತು ಸಿಗುತ್ತಿಲ್ಲ ವ್ಯತ್ಯಾಸ ಆಗುತ್ತಿದೆ ಆ ವ್ಯತ್ಯಾಸವನ್ನು ಸರಿಪಡಿಸುವಗೋಸ್ಕರ ಈ ಸರ್ಕಾರದ ಗಮನಕ್ಕೆ ತಂದು ನಮಗೆ ಸಿಗಬೇಕಾದಂತ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ತಮ್ಮ ಅಭಿಪ್ರಾಯವನ್ನು ನಮ್ಮೆಲ್ಲರ ಮುಂದೆ ಹಾಗೂ ರಾಜ್ಯಪಾಲರ ಸಮ್ಮುಖದಲ್ಲಿ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದೀರಿ ಅದಕ್ಕಾಗಿ ನಿಮ್ಮೆಲ್ಲರ ಧ್ವನಿಯಾಗಿ ಸರ್ಕಾರದ ಗಮನವನ್ನು ಮೊದಲು ಕೂಡ ಸೆಳೆದಿದ್ದೇನೆ, ಮತ್ತು ಮುಂದು ಕೂಡ ಸೆಳೆಯುತ್ತೇನೆ ಎಂದು ಶಾಸಕರಾದ ಲಕ್ಷ್ಮಣ ಸವದಿ ಹೇಳಿದರು.
ವಿಶೇಷವೇನೆಂದರೆ ಈ ಸಮಾವೇಶದಲ್ಲಿ ಅತಿ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಇದೇ ಸಮಾವೇಶದಲ್ಲಿ ಕಾಗವಾಡ ಶಾಸಕರಾದ ರಾಜು ಕಾಗೆ, ಚಿಕ್ಕೋಡಿ ಶಾಸಕರಾದ ಗಣೇಶ್ ಹುಕ್ಕೇರಿ, ಕಾಗವಾಡದ ಮಾಜಿ ಶಾಸಕರಾದ ಶ್ರೀಮಂತ್ ಪಾಟೀಲ್, ವೀರ್ ಕುಮಾರ್ ಪಾಟೀಲ್, ಮತ್ತು ಅಥಣಿ ತಾಲೂಕಿನ ಹಳ್ಳಿಗಳಿಂದ ಆಗಮಿಸಿದ ಜೈನ ಸಮುದಾಯದ ಅನೇಕ ಪ್ರಮುಖ ಮುಖಂಡರುಗಳು, ಮತ್ತು ಸಮುದಾಯದವರು ಉಪಸ್ಥಿತರಿದ್ದರು.
ವರದಿಗಾರ. ವಿಠಲ ಖೋಕಾಟೆ
