ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿಯಲ್ಲಿ ಪ್ರೀಮಿಯಂನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೋಡ್ಲಿ ಸಖಿಯಾದ ಅನಿತಾ ವಿ. ಮಠಪತಿ ರವರು ಫಲಾನುಭವಿಗಳಾದ ರಾಮಣ್ಣ ಮಡಿವಾಳ ರವರಿಗೆ ಈ ಯೋಜನೆಯನ್ನು ಮಾಡಿಸಿರುತ್ತಾರೆ.
ಈ ಯೋಜನೆಯನ್ನು ಮಾಡಿಸಿದ ಮೂರು ತಿಂಗಳಿನಲ್ಲಿ ರಾಮಣ್ಣ ಮಡಿವಾಳ ರವರು ಮರಣ ಹೊಂದಿರುತ್ತಾರೆ. ಕಾರಣ ಅವರ ಪತ್ನಿಯಾದ ಕವಿತಾ ರಾಮಣ್ಣ ಮಡಿವಾಳ ಅವರಿಗೆ ಪ್ರೀಮಿಯಂ ಮೊತ್ತ ರೂ. 2,00,000 (ಎರಡು ಲಕ್ಷ ರೂಪಾಯಿ) ಹಣವನ್ನು ಬ್ಯಾಂಕಿನ ವ್ಯವಸ್ಥಾಪಕರಾದ ಸಾಯಿಕೀಶೊರ ಅವರು ಪಾವತಿಸಿದರು ಬ್ಯಾಂಕಿನ ಸಿಬ್ಬಂದಿಗಳಾದ ಕಿರಣ ರೇಶ್ಮಿ ಸುಧಾಕರ ವಾಡಿ ಅಸಿಸ್ಟೆಂಟ್ ಮ್ಯಾನೇಜರ್ ಕ್ಯಾಷಿಯರ್ ಯೋಗೇಶ್ ಪಡಸಾಲೆ ಮತ್ತು ಮೆಸೆಂಜರ್ ಮಲ್ಲಣ್ಣ ಮಡಿವಾಳ ಸಿದ್ರಾಮ ರೇವಣ್ಣ ಹಾಗೂ ಅನಿತಾ ಮಠಪತಿ ಹಾಗೂ ಪಿ ಕೆ ಪಿ ಎಸ್ ನಿರ್ದೇಶಕರಾದ ಶಿವಲಿಂಗಪ್ಪ ಸುಲೇಪೇಠ ಶಂಕರ ಶಿರೂರು ಇದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್
