
ತಾರಕೇಶ್ವರ ( ತಾರೋಕೇಶ್ವರ ಎಂದು ಉಚ್ಚರಿಸಲಾಗುತ್ತದೆ) ಭಾರತದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಪ್ರಸಿದ್ಧ ಪವಿತ್ರ ನಗರ ಮತ್ತು ಪುರಸಭೆಯಾಗಿದೆ. ತಾರಕೇಶ್ವರವನ್ನು “ಬಾಬರ್ ಧಾಮ್” ಅಥವಾ ” ಶಿವನ ನಗರ” ಎಂದು ಕರೆಯಲಾಗುತ್ತದೆ. ಇದು ಪಶ್ಚಿಮ ಬಂಗಾಳ ಮತ್ತು ಭಾರತದ ಪ್ರಮುಖ ಪ್ರವಾಸಿ ಮತ್ತು ಪವಿತ್ರ ಸ್ಥಳವಾಗಿದೆ. ತಾರಕೇಶ್ವರವು ರಾಜ್ಯ ರಾಜಧಾನಿ ಕೋಲ್ಕತ್ತಾದಿಂದ ೫೮ ಕಿಲೋಮೀಟರ್ (೩೬ ಮೈಲಿ) ದೂರದಲ್ಲಿ ಮತ್ತು ರಾಷ್ಟ್ರೀಯ ರಾಜಧಾನಿ ನವದೆಹಲಿಯಿಂದ ಸುಮಾರು ೧೫೨೦ ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ಬಂಗಾಳದಲ್ಲಿರುವ ಭಗವಾನ್ ಶಿವ ಪಂಥದ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಿಂದ ತಾರಕೇಶ್ವರವನ್ನು ರೈಲು ಮತ್ತು ಬಸ್ ಮೂಲಕ ಅನುಕೂಲಕರವಾಗಿ ತಲುಪಬಹುದು. ತಾರಕೇಶ್ವರ ನಿಲ್ದಾಣವು ಹೌರಾ ನಿಲ್ದಾಣದಿಂದ ಉತ್ತಮ ಸಂಪರ್ಕ ಹೊಂದಿದೆ. ಈ ನಗರವು ಕೃಷಿಗೆ ಹೆಸರುವಾಸಿಯಾಗಿದೆ. ತಾರಕೇಶ್ವರದ ( ವಿಶೇಷವಾಗಿ ಚಂಪಂಡಂಗ ) ಆಲೂಗಡ್ಡೆ ಭಾರತದಾದ್ಯಂತ ಪ್ರಸಿದ್ಧವಾಗಿದೆ.
- ಜೆ. ಪ್ರದೀಪ್
