ಶಿವಮೊಗ್ಗ :ತೀರ್ಥಹಳ್ಳಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ ಇಲ್ಲಿ ಹುಟ್ಟಿ ಕಾನ್ಪುರ ಐಐಟಿಗೆ ಹೋಗುತ್ತಿರುವ ತೀರ್ಥಹಳ್ಳಿ ತಾಲೂಕಿನ ಮೊದಲ ವ್ಯಕ್ತಿ ಸುಶಾಂತ್ ಆಗಿದ್ದಾರೆ ಅವರ ಪೋಷಕರಿಗೆ, ಶಿಕ್ಷಕರಿಗೆ ಇದೊಂದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಆರಗ ಜ್ಞಾನೇ೦ದ್ರ ಹೇಳಿದರು.
ಮಂಗಳವಾರ ಶಾಸಕರ ಕಚೇರಿಯಲ್ಲಿ ಸನ್ಮಾನಿಸಿ ಮಾತನಾಡಿದ ಅವರು ಐಎಎಸ್, ಐಪಿಎಸ್, ಮಿಲ್ಟ್ರಿಯವರು ಐ ಐ ಟಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಮ್ಮ ಊರಿನ ವಿದ್ಯಾರ್ಥಿ ಐಐಟಿ ಯಲ್ಲಿ ಓದಲು ಹೋಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು. ಈತನನ್ನು ನೋಡಿ ಬೇರೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಲಿ. ನಾನೊಬ್ಬ ಶಾಸಕನಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಬೆನ್ನು ತಟ್ಟುವುದು ನಮ್ಮ ಕರ್ತವ್ಯ . ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಯಲ್ಲಿ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ , ಎಂದು ನೋಡಿ ನಿಜವಾಗಲೂ ಸಂತೋಷವಾಗಿದೆ ಎಂದರು.
ವರದಿ ಪ್ರಸಾದ್ ಎಚ್.ಬಿ



















