ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕವನ : ದೇವರು ನಗುತ್ತಿದ್ದಾನೆ

ಓ ಸ್ವಾರ್ಥಿ ಮನುಜ
ಎಲ್ಲವೂ ನನ್ನದೇ ,
ಎಲ್ಲದಕ್ಕೂ ನನ್ನದೇ ಯಜಮಾನಿಕೆ
ಎಂದು ಹಲುಬುತ್ತಿರುವ ನೀನು
ಹರಿವ ನದಿಯ ನೀರ ನೀನೊಬ್ಬನೇ ಕುಡಿಯಲಾಗುವುದೇ ?
ಬೀಸುವ ಗಾಳಿಯ
ನೀನು ಹಿಡಿದಿಡಲು ಆಗುವುದೇ ??

ದೇವರು ಕೊಟ್ಟ ಸುಂದರ ಪ್ರಕೃತಿ
ಹರಿವ ನೀರು ,ಸುಂದರ ಪರಿಸರ
ಹರಿವ ನೀರು , ಬೀಸುವ ಗಾಳಿ
ನಿನ್ನ ಸ್ವಾರ್ಥಕ್ಕೆ ಬಲಿಯಾಗುತ್ತಿವೆ ;
ನಾನು,ನನ್ನ ಕುಟುಂಬ , ಎಲ್ಲವೂ ನನ್ನದೇ ಎನುವ
ನಿನ್ನ ಹುಚ್ಚು ತನಕೆ ದೇವರು
ನಗುತಿದ್ದಾನೆ…
ನಿನ್ನ ರಾಕ್ಷಸ ರೂಪಕೆ
ನಿನ್ನ ನರಿ ಬುದ್ದಿಗೆ
ಪಶು ಚರ್ಮ ಹೊದ್ದ ಮೃಗತನಕೆ,
ಬಣ್ಣ ಬದಲಾಯಿಸುವ ಗೋಸುಂಬೆ ತನಕೆ
ದೇವರು ನಗುತ್ತಿದ್ದಾನೆ…

ಮಾನವ ರೂಪದ ಸ್ವಾರ್ಥ ರಾಕ್ಷಸ
ನೀನೆಷ್ಟು ದಿನ ಬದುಕುವೆ ?
ನೂರು ,ಇನ್ನೂರು ,ಮುನ್ನೂರು ವರ್ಷಗಳು..ಬದುಕುವ ಆಸೆಯೇ ನಿನಗೆ !!!

ಯಾರದೋ ಅನ್ನ ಕಿತ್ತು ತಿಂದ
ದೇವರು ಕೊಟ್ಟ ಪರಿಸರ ದೋಚಿದ
ನೀನು ,ನಿನ್ನ ಕುಟುಂಬ , ಮಕ್ಕಳು
ಮೊಮ್ಮಕ್ಕಳಿಗಾಗಿ ಎಲ್ಲವನ್ನೂ ದೋಚಿದ
ನಿನಗೆ ಮುಗ್ಧ ಜನರ ಶಾಪವಿದೆ
ದೇವರ ಆಕ್ರೋಶವಿದೆ…

ನಡೆ ನುಡಿಯಲ್ಲಿ ಆದರ್ಶದ ಮಂತ್ರ
ಯಾರದೋ ಪಾಲು ಕಿತ್ತು ತಿನ್ನುವ ಕುತಂತ್ರ
ನಾನು, ನನ್ನದೇ ಎಂಬ ಹುಚ್ಚುತನ
ಇನ್ನೊಬ್ಬರ ಕಾಲೆಳೆಯುವ ಭಟ್ಟಂಗಿತನ
ಶಾಪವಾಗಿ ನಿನ್ನನು ಕಾಡಲಿದೆ ;
ಓ ಮಾನವೀಯತೆಯ ಶತೃವೇ
ಈಗಲಾದರೂ ಬದಲಾಗು
ಇಲ್ಲವೇ ಶಾಪಕ್ಕೆ ಗುರಿಯಾಗು..

  • ಭೇರ್ಯ ರಾಮಕುಮಾರ್
    ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು
    ಮೈಸೂರು.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!