ಬಳ್ಳಾರಿ / ಕಂಪ್ಲಿ : ಯೋಗದಿಂದ ಮನುಷ್ಯನನ್ನು ಮಾನಸಿಕ ಮತ್ತು ದೈಹಿಕವಾಗಿ ಸದೃಡವಾಗಿಸಬಹುದು
ಎಂದು ಗೃಹ ರಕ್ಷಕ ದಳದ ಘಟಕಾಧಿಕಾರಿ ಹೊನ್ನೂರವಲಿಸಾಬ್ ಹೇಳಿದರು. ಪಟ್ಟಣದ ಷಾಮೀಯಚಂದ ಪ್ರೌಢ ಶಾಲೆ ಮೈದಾನದಲ್ಲಿರುವ ಗೃಹ ರಕ್ಷಕ ದಳದ ಕಚೇರಿಯಲ್ಲಿ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿ ನಂತರ ಮಾತನಾಡಿ ಒತ್ತಡ ಜೀವನದಲ್ಲಿ ಯೋಗ ಧ್ಯಾನ ಪ್ರಾಣಯಾಮ ಸರ್ವರೋಗಕ್ಕೆ ರಾಮಬಾಣವಾಗಿದೆ ಧ್ಯಾನ ಅವಶ್ಯಕ ಪ್ರತಿಯೊಬ್ಬರು ಯೋಗ ಧ್ಯಾನ ಅಳವಡಿಸಿಕೊಂಡಾಗ ನೆಮ್ಮದಿ ಜೀವನ ನೆಡಸಬಹುದು. ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಆರೋಗ್ಯದ ಸರಳ ಸೂತ್ರವಾಗಿದೆ. ಯೋಗದಿಂದ ನೆಮ್ಮದಿ, ತೃಪ್ತಿ, ಸಂತೋಷ ಲಭಿಸಲಿದೆ. ಮಾನವ ಸರ್ವತೋಮುಖ ಅಭಿವೃದ್ಧಿಗಾಗಿ ಯೋಗದ ಅವಶ್ಯಕತೆ ಇದೆ ಎಂದರು. ಗೃಹರಕ್ಷಕ ದಳದ ಸಿಬ್ಬಂದಿಗಳು ಯೋಗಾಸನ ಮಾಡಿದರು.
ಈ ಸಂದರ್ಭದಲ್ಲಿ ಲೀಡರ್ಗಳಾದ ಕೆ.ಸುರೇಶ ಕೆ.ಜಗದೀಶ, ಬಿ.ಚಂದ್ರಶೇಖರ್ ಸೇರಿ ಅನೇಕ ಗೃಹ ರಕ್ಷಕ ದಳದ ಸಿಬ್ಬಂದಿಗಳಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















