ಬೆಳಗಾವಿ : ಗೋಕಾಕ ಲಕ್ಷ್ಮೀ ದೇವಿ ಜಾತ್ರೆ ಬಂದೋಬಸ್ತ್ ಗೆ ಬಂದಿದ್ದ ಧಾರವಾಡ ಎಪಿಎಂಸಿ ಠಾಣೆ ಎ. ಎಸ್. ಐ ಲಾಲಾಸಾಬ್ ಮೀರಾನಾಯಿಕ ( 56) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗೋಕಾಕ ಜಾತ್ರೆ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ನಗರದ ಹಾಸ್ಟೆಲ್ ಒಂದರಲ್ಲಿ ವಾಸ್ತವ್ಯ ಮಾಡಿದಿದ್ದರು. ಹೃದಯಾಘಾತ ಸಂಭವಿಸಿದಕ್ಕೆ ಅಕಾಲಿಕ ನಿಧನ ಹೊಂದಿದ್ದಾರೆ.
ಮೃತ ಲಾಲಸಾಬ ಅವರು 1994 ರಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಆರಂಭಿಸಿದ್ದರು. ಗೋಕಾಕ್ ಶಹರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ವರದಿ ಬಾಳೇಶ ದಂಡಿನ್



















