ಬಾಗಲಕೋಟೆ : ದಿನಾಂಕ 11 -7-2025 ರಂದು, ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಕರ್ನಾಟಕ ರಾಜ್ಯ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ( ರಿ.) ಬೆಂಗಳೂರು, ರಾಜ್ಯ ಬೇರ್ ಫೂಟ್ ಟೆಕ್ನಿಷಿಯನ್ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಜಿಲ್ಲಾ ಘಟಕ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ನರೇಗಾ ಹೊರ ಗುತ್ತಿಗೆ ಸಿಬ್ಬಂದಿಗಳ ಪ್ರತಿಭಟನೆ ಜರುಗಿತು.
ನರೇಗಾ ಹೊರ ಗುತ್ತಿಗೆ ಸಿಬ್ಬಂದಿಗಳು ಎದುರಿಸುತ್ತಿರುವ ಸಮಸ್ಯೆಗಳು, ಆರು ತಿಂಗಳ ವೇತನ ಪಾವತಿ ಮಾಡದೆ ಇರುವುದು, ಎಲ್ಲಾ ನೌಕರರಿಗೂ ಸೇವಾ ಭದ್ರತೆ ಒದಗಿಸುವುದು, ನರೇಗಾದ ಎಲ್ಲಾ ನೌಕರರಿಗೆ ಆರೋಗ್ಯ ವಿಮೆ ತ್ವರಿತವಾಗಿ ಅನುಷ್ಠಾನ ಮಾಡವುದು ಸೇರಿದಂತೆ ಒಡಿಸಾ, ಆಂಧ್ರ ಪ್ರದೇಶ, ತೆಲಂಗಾಣ, ಜಾರ್ಖಂಡ್, ಪಂಜಾಬ್ ಸೇರಿದಂತೆ ಇತರ ರಾಜ್ಯಗಳಲ್ಲಿ ನರೇಗಾ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಸಿಬ್ಬಂದಿಗಳನ್ನು ಕಾಯಂಗೊಳಿಸಿದ್ದು, ನಮ್ಮ ರಾಜ್ಯದಲ್ಲಿ ಈ ರಾಜ್ಯಗಳ ಮಾದರಿಯೇ ಅನುಸರಿಸಬೇಕು, ಕೇಂದ್ರ ಸರ್ಕಾರವು ಆಡಳಿತಾತ್ಮಕ ಅನುದಾನವನ್ನು 6% ಬಿಡುಗಡೆ ಮಾಡಿದರೂ ಕರ್ನಾಟಕ ಸರ್ಕಾರ 3.5 ರಿಂದ 4.0% ಮಾತ್ರ ವೆಚ್ಚವನ್ನು ಮಾಡುತ್ತಿದ್ದು, ಉಳಿದ ಅನುದಾನವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ನೀಡಲಾಗುತ್ತಿದೆ, ಸರ್ಕಾರಿ ನೌಕರಿಗೆ ಇರುವ ಹಾಗೆ ನಮಗೂ ಕೂಡಾ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸ್ಯಾಲರಿ ಖಾತೆಗಳನ್ನು ಮಾಡಿಸಿಕೊಡಬೇಕು, ಪ್ರಯಾಣ ಭತ್ಯೆ ಈಗ ನೀಡುತ್ತಿರುವ 2000 ಇದನ್ನು ಸಹ ಪರಿಸ್ಕರಿಸಬೇಕು ಎಂದು ನರೇಗಾ ಹೊರಗುತ್ತಿಗೆ ನೌಕರರು ಪ್ರತಿಭಟಿಸಿದರು.
ವರದಿ ಶೇಖಪ್ಪ ಬಾಳಿಕಾಯಿ



















