ಬಳ್ಳಾರಿ / ಕಂಪ್ಲಿ : ಇತ್ತೀಚಿನ ಒತ್ತಡದ ಜೀವನದಲ್ಲಿ ಧಾರ್ಮಿಕ ಮತ್ತು ಆಧ್ಯಾತೀಕ ಮನೋಭಾವನೆಗಳನ್ನು ರೂಡಿಸಿಕೊಂಡಾಗ ಮಾತ್ರ ನೆಮ್ಮದಿ ಜೀವನ ನೆಡೆಸಲು ಸಾಧ್ಯ ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ರೋಹಿತಾಕ್ಷ ಹೇಳಿದರು ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ತಾಲೂಕು ಕಛೇರಿಯಲ್ಲಿ ಎಲ್.ಐ.ಸಿ.ಯಿಂದ ಪ್ರಗತಿ ರಕ್ಷ ಕವಚ ಮತ್ತು ಆರೋಗ್ಯ ರಕ್ಷಾ ವಿಮಾ ಯೋಜನೆಡಿಯಲ್ಲಿ ಮರಣ ಹೊಂದಿದ ಕುಟುಂಬದ ಸದ್ಯಸರ ನಾಮಿನಿದಾರರಿಗೆ ಇನ್ಸೋರೆನ್ಸ್ ರಕ್ಷಾ ಮಂಜೂರಾತಿ ಪ್ರತ ವಿತರಿಸಿ ಮಾತನಾಡಿ ಸದಸ್ಯರ ತಮ್ಮ ಕುಟುಂಬದಲ್ಲಿ ರಕ್ಷಾ ಮಂಜೂರಾತಿ ಸದುಪಯೋಗ ಪಡೆಯಿರಿ ಬಡ ಮತ್ತು ಮಾಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕವಾಗಿ ಸಬಲರಾಗಲು ಸಾಲ ನೀಡುತ್ತದೆ ಮಹಿಳೆಯರು ಸ್ವಯಂ ಉದ್ಯೋಗ ಪಡೆಯುವ ಮೂಲಕ ಆರ್ಥಿಕವಾಗಿ ಸದೃಡರಾಗಿ ಹಣವನ್ನು ಪೋಲು ಮಾಡದೆ ಉಳಿತಾಯ ಮಾಡಿ ಉತ್ತಮ ಜೀವನ ಹಾಗೂ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಗ್ರಾಮಾಭಿವೃದ್ದಿ ಯೋಜನೆ ಪ್ರತಿಯೋಬ್ಬ ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕು ಮರಣ ಹೊಂದಿದ 3ಜನ ಕುಟುಂಬ ಮತ್ತು 6ಜನ ಸದ್ಯಸರ ನಾಮಿನಿದಾರರಿಗೆ ಇನ್ಸೋರೆನ್ಸ್ ರಕ್ಷಾ ಮಂಜೂರಾತಿ ಪ್ರತದಲ್ಲಿ ಮೊತ್ತ 6ಲಕ್ಷ 60ಸಾವಿರ ರೂಪಾಯಿ ಮೊತ್ತ ವಿತರಿಸಲಾಯಿತು.
ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಮಾತನಾಡಿ ಸ್ವಸಹಾಯ ಸಂಘಗಳು ಉನ್ನತವಾಗಿ ಸಾಗಲು ಟ್ರಸ್ಟ್ ಶ್ರಮ ಹೆಚ್ಚಿದೆ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ಉನ್ನತ ರಂಗದಲ್ಲಿ ಬೆಳೆಯಬೇಕು ಎಂದರು. ಡಾ. ವೆಂಕಟೇಶ ಭರಮಕ್ಕನವರ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾನವೀಯ ನೆಲೆಯಲ್ಲಿ ನಿಸ್ವಾರ್ಥ ಸೇವೆ ಮಾಡುವಲ್ಲಿ ಬಡ ಮತ್ತು ಮಧ್ಯಮ ಕುಟುಂಬಗಳಿಗೆ ವರದಾನವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಸಂಜುಕುಮಾರ್ ಮುಖಂಡರಾದ ಕ. ಮಾ. ಹೇಮಯ್ಯಸ್ವಾಮಿ ಮೇಲ್ಚಿಚಾರಕರಾದ ರಾಜು, ಪ್ರಭು ಮಂಜುನಾಥ, ಶ್ರೀಶೈಲ, ಅವಿನಾಶ, ಮಹಾಂತೇಶ, ರೇಖಾ, ಮಂಜುಳಾ ಜಯಲಕ್ಷೀ, ಸಿಬ್ಬಂದಿಗಳಾದ ಮುರ್ಗೇಶ ಹಾಗೂ ರಾಜೇಶ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















