ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಪಾದಚಾರಿಗಳು ಓಡಾಡುವ ಮಾರ್ಗದಲ್ಲಿ ಹೋಟೆಲ್, ಲಾಡ್ಜ್, ಬೇಕರಿ, ದಿನಸಿ ಅಂಗಡಿ, ಜ್ಯೂಸ್ ಸೆಂಟರ್ ಸೇರಿದಂತೆ ಇನ್ನಿತರೆ ಅಂಗಡಿ ಮಾಲೀಕರು ಅವರ ವ್ಯವಹಾರಕ್ಕೆ ಸೇರಿದ ನಾಮಫಲಕವನ್ನು ಪಾದಚಾರಿಗಳಿಗೆ ಅಡ್ಡಿಯಾಗುವ ರೀತಿ ಇಡದಂತೆ ಮೊದಲ ಬಾರಿಗೆ ಸೂಚನೆ ನೀಡಲಾಯಿತು ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವರೆದರೆ ಯಾವುದೇ ಮುನ್ಸೂಚನೆ ನೀಡದೆ ಕರ್ನಾಟಕ ಪುರಸಭೆ ಕಾಯಿದೆ ನಿಯಮ 136 ಪ್ರಕಾರ ತೆರವುಗೊಳಿಸಲಾಗುವುದು ಮತ್ತು ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗುತ್ತಿರುವ ಮೇರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ನಿಮಗೆ ನೀಡಿರುವ ಉದ್ದಿಮೆ ಪರವಾನಿಗೆ ರದ್ದು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ವರದಿ ಗುಂಡ್ಲುಪೇಟೆ ಕುಮಾರ್



















