ಬೀದರ್/ ಬಸವಕಲ್ಯಾಣ : ಸಮುದಾಯ ಆರೋಗ್ಯ ಕೇಂಧ್ರ ರಾಜೇಶ್ವರ ಆರ್ ಕೆ ಎಸ್ ಕೆ ಕಾರ್ಯಕ್ರಮದಡಿಯಲ್ಲಿ “ಹದಿಹರೆಯದವರ ಆರೋಗ್ಯ ಮತ್ತು ಕ್ಷೇಮ ದಿನಾಚರಣೆ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢ ಶಾಲೆ ರಾಜೋಳದ ಮುಖ್ಯ ಗುರುಗಳು ಅಧ್ಯಕ್ಷತೆಯನ್ನು ವಹಿಸಿಕೊಂಡು, ಆಶಾ ಕಾರ್ಯಕರ್ತೆಯಿಂದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು. ಮಕ್ಕಳಿಗೆ ಪೌಷ್ಟಿಕ ಆಹಾರ ಹಾಗೂ ಸಾಂಕ್ರಾಮಿಕ ರೋಗಗಳ ಮತ್ತು ಕಿಶೋರಿಯರಿಗೆ ಶುಚಿತ್ವ ಅಲಬೆಂಡೋಜಲ್ ( ಜಂತು ಹುಳು ನಿವಾರಕ) ಮತ್ತು ವಿಪ್ಸ್ ಬಗ್ಗೆ ಮಾಹಿತಿ ನೀಡಲಾಯಿತು ಕೈ ತೊಳೆಯುವ ವಿಧಾನ, ಶುಚಿ ಮತ್ತು ಸ್ನೇಹ ಕ್ಲಿನಿಕ್ , ಹಾಗೂ ಹದಿಹರೆಯದ ಕಿಶೋರ ಮತ್ತು ಕಿಶೋರಿಯರ ಬಗ್ಗೆ ಸಮುದಾಯ ಆರೋಗ್ಯ ಕೇಂದ್ರದ ಆರ್ ಕೆ ಎಸ್ ಕೆ ಆಪ್ತ ಸಮಾಲೋಚಕರಾದ ಶ್ರೀ ಸಂಜೀವಕುಮಾರ ಪೂಜಾರಿರವರಿಂದ ತಿಳಿಸಲಾಯಿತು.
ವರದಿ : ಶ್ರೀನಿವಾಸ ಬಿರಾದಾರ



















