ಬಳ್ಳಾರಿ / ಕಂಪ್ಲಿ : ಕಂಪ್ಲಿ ಪುರಸಭೆ ವ್ಯಾಪ್ತಿಯ ಕೋಟೆಯ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಶ್ರೀ ರಾಯರ ಮಠದಲ್ಲಿ ಶ್ರೀ ಜಯತೀಥ ಗುರು ಸಾರ್ವಭೌಮರ ಮಧ್ಯಾರಾಧನೆ ಶ್ರದ್ಧೆ, ಭಕ್ತಿ, ಸಡಗರ ಸಂಭ್ರಮಗಳಿಂದ ಜರುಗಿತು.
ಬೆಳಿಗ್ಗೆ ಸುಪ್ರಭಾತ, ಅಷ್ಟೋತ್ತರ ಪಾರಾಯಣ, ಪಂಚಾಮೃತಾಭಿಷೇಕ,ಭಜನೆ, ಪಲ್ಲಕ್ಕಿ ಉತ್ಸವ, ನೈವೇಧ್ಯ,ಹಸ್ತೋದಕ,ತೀರ್ಥ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ರಾಯರ ಬೃಂದಾವನವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೋಟೆಯ ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಮಠದ ಅರ್ಚಕರಾದ ಕಿಶೋರಾಚಾರ್, ಕಂಪ್ಲಿ ಶ್ರೀಅಮೃತ ಶಿಲಾರಾಮಚಂದ್ರದೇವರ ಆರ್ಚಕ ಶ್ರೀನಿವಾಸಾಚಾರ್, ರಾಘವೇಂದ್ರಾಚಾರ್ಗುಡಿ ಪೌರೋಹಿತ್ಯದಲ್ಲಿ ಮಧ್ಯಾರಾಧನೆ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು. ಸಮಾರಂಭದಲ್ಲಿ ಕಂಪ್ಲಿ,ಕೋಟೆಯ ಬ್ರಾಹ್ಮಣ ಸಮಾದವರು ಭಾಗವಹಿದ್ದರು.
ವರದಿ : ಜಿಲಾನಸಾಬ್ ಬಡಿಗೇರ



















