
ಬೆಳಗಾವಿ/ ಕಾಗವಾಡ :ದಿ. 19/07/2025 ಬೆಳಿಗ್ಗೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಕೆ. ಆರ್. ಈ. ಸಂಸ್ಥೆಯ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕಾ ಘಟಕ ಕಾಗವಾಡ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನವನ್ನು ಮಾಡಲಾಯಿತು.
ಈ ಸಮಾರಂಭದ ದಿವ್ಯ ಸನ್ನಿಧಿಯನ್ನು ಕೌಲಗುಡ್ಡದ ಸಿದ್ದಯೋಗಿ ಅಮರೇಶ್ವರ ಮಹಾರಾಜರು ವಹಿಸಿಕೊಂಡಿದ್ದರು. ಇದೆ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ ಸನ್ಮಾನ್ಯ ಶ್ರೀ ಚಿದಾನಂದ ಸವದಿಯವರು ಹಾಗೂ ಕಾಗವಾಡದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಾಜು ಕಾಗೆಯವರು ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮತ್ತು ಈ ಕಾರ್ಯಕ್ರಮದಲ್ಲಿ ಯುವ ಧುರೀಣರು ಹಾಗೂ ಜನಪ್ರಿಯ ನಾಯಕರಾದ ಚಿದಾನಂದ ಸವದಿ ಅವರಿಗೆ ಪತ್ರಕರ್ತರಿಂದ ಸತ್ಕಾರ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಘಟಕದ ಅಧ್ಯಕ್ಷರಾದ ಶ್ರೀ ಸುರೇಶ ಕಾಗಲಿ ಹಾಗೂ ಹಿರಿಯ ಮುಖಂಡರು ಮತ್ತು ಎಲ್ಲಾ ಪತ್ರಿಕೆಯ ಮಾದ್ಯಮ ಮಿತ್ರರು ಉಪಸ್ಥಿತರಿದ್ದರು.
ವರದಿ ವಿಠ್ಠಲ ಖೋಕಾಟೆ ಅಥಣಿ



















