ಯಾದಗಿರಿ :ರಾಷ್ಟ್ರೀಯ ಅಹಿಂದ ಸಂಘಟನೆ (ರಿ.) ಯಾದಗಿರಿ ಜಿಲ್ಲಾ ಅಧ್ಯಕ್ಷರಾಗಿ ಜಗದೀಶ್ ತಂದೆ ಲಕ್ಷ್ಮಮಣ್ಣ ಪೂಜಾರಿ “ರಾಮಪುರ ಇವರನ್ನು ಯಾದಗಿರಿ ಜಿಲ್ಲಾ ಅಧ್ಯಕ್ಷರನ್ನಾಗಿ ರಾಜ್ಯ ಅಹಿಂದ ಅಧ್ಯಕ್ಷರಾದ ಶ್ರೀ ಮುತ್ತಣ್ಣ ಎಸ್ ಶಿವಳ್ಳಿ ಅವರು ಘೋಷಣೆ ಮಾಡಿ ಆದೇಶ ಪತ್ರ ಜಗದೀಶ್ ಪೂಜಾರಿ ಅವರಿಗೆ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ರಾಷ್ಟ್ರಿಯ ಅಹಿಂದ ಸಂಘಟನೆ ಬಲವರ್ಧನೆಗಾಗಿ, ಜಾಗೃತಿ, ಸಂಘಟನೆ, ಹೋರಾಟ, ಜನ ಸೇವೆಗಾಗಿ, ಪ್ರಾಮಾಣಿಕ, ನಿಷ್ಠೆಯಿಂದ, ಸಮಾಜ ಸೇವೆ ಮಾಡುವುದಾಗಿ ನೂತನವಾಗಿ ಆಯ್ಕೆಯಾದ ರಾಷ್ಟ್ರಿಯ ಅಹಿಂದ ಜನ ಸಂಘಟನೆ ಜಿಲ್ಲಾ ಅಧ್ಯಕ್ಷರು ಜಗದೀಶ್ ಪೂಜಾರಿ ತಿಳಿಸಿದ್ದಾರೆ, ಯಾದಗಿರಿ ಜಿಲ್ಲೆಯ, ಅಹಿಂದ ಹೋರಾಟಗಾರರು, ಜನ ಸೇವಕರ, ಸಹಕಾರ ಮಾರ್ಗದರ್ಶನ, ಬೆಂಬಲ ಪಡೆದು, ಅಹಿಂದ ಜನರ ಏಳಿಗೆಗಾಗಿ ಶ್ರಮಿಸುವ ಭರವಸೆ ನೀಡಿ, ಯಾದಗಿರಿ ಜಿಲ್ಲೆಯಲ್ಲಿ ಅಹಿಂದ ಸಂಘಟನೆ ಭದ್ರ ಬುನಾದಿ ಹಾಕಿದ ಹಿರಿಯ ಹೊರಟಗಾರರು, ಸನ್ಮಾನ್ಯ ಶ್ರೀ ಮೌಲಾಲಿ ಅನಪುರ, ಭಾಷಮಿಯ, ವಡಗೇರಾ, ಶರಣಪ್ಪ ಮನೆಗೇರ್, ಭೀಮ್ಮಣ್ಣ ಮೇಟಿ, ಶರಣಪ್ಪ ಸದಾಲಾಪುರ್, ಸಿದ್ದಣ್ಣ ವಡಗೇರಾ, ವಿಶ್ವನಾಥ್ ನೀಲಹಳ್ಳಿ, ಶಿವಾಜಿ ಮೆಟೆಗಾರ, ಉಮೇಶ್ ಮುದ್ನಾಳ್, ಇನ್ನಿತರರ ಮಾರ್ಗದರ್ಶನ, ಸಹಕಾರದಲ್ಲಿ ಸಂಘಟನೆ ಬಲವರ್ಧನೆಗೊಳಿಸುವೆ ಎಂದು ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















