ಬಾಗಲಕೋಟೆ : ಮುಧೋಳ ತಾಲೂಕಿನ ಮುಗಳಖೋಡದ ಪ್ರತಿಷ್ಟಿತ ಮನೆತನದ ಶ್ರೀಮತಿ ಕಲಾವತಿ ಪರಮಾನಂದ ಸರವಗೋಳ [78] ಶನಿವಾರ ಬೆಳಗ್ಗೆ 8.45.ಕ್ಕೆ ನಿಧನ ಹೊಂದಿದರು.
ಕೊಪ್ಪಳದ ಡಿ. ವೈ. ಎಸ್. ಪಿ. ಮುತ್ತಣ್ಣ ಸರವಗೋಳ ಸೇರಿದಂತೆ ಇಬ್ಬರು ಗಂಡು ಮಕ್ಕಳು ಮೂರು ಜನ ಹೆಣ್ಣುಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶೋಕ ಇಂಚಲದ ಡಾ. ಶ್ರೀ ಶಿವಾನಂದ ಭಾರತಿ ಶ್ರೀ ಗಳು, ಕುಳಲಿಯ ಶಂಕರಾನಂದ ಶ್ರೀಗಳು, ರೂಗಿಯ ನಿತ್ಯಾನಂದ ಶ್ರೀಗಳು, ಮರೇಗುದ್ದಿಯ ಗುರುಪಾದ ಶ್ರೀಗಳು, ಹಡುಗಿನಾಳದ ಮುಕ್ತೇಶ್ವರ ಶ್ರೀಗಳು, ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಸೇರಿದಂತೆ ಶರಣರ ಬಳಗವು ಶೋಕ ವ್ಯಕ್ತಪಡಿಸಿದರು.
- ಕರುನಾಡ ಕಂದ



















