ಬೆಳಗಾವಿ// ಅಥಣಿ ತಾಲೂಕಿನ ಐಗಳಿ ಕ್ರಾಸ್ ನಲ್ಲಿ ಜಲ ಶುದ್ಧೀಕರಣ ಘಟಕದಲ್ಲಿ ನಡೆದ ಅಥಣಿ ತಾಲೂಕಿನ ಪೂರ್ವ ಭಾಗದ 14 ಗ್ರಾಮಗಳ ಅಂದಾಜು 24.98 ಕೋಟಿ ರೂ. ಗಳಲ್ಲಿ ಮಾಡಲಾಗುತ್ತಿರುವ ಕುಡಿಯುವ ನೀರು ಸರಬರಾಜು ಯೋಜನೆಯ ಪುನಶ್ಚೇತನ ಕಾಮಗಾರಿಯ ಭೂಮಿ ಪೂಜೆಯನ್ನು ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿಯವರು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಹಾಗೂ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದ ಸಂದರ್ಭದಲ್ಲಿ ಮಾಜಿ ಜಿ. ಪಂ ಸದಸ್ಯರಾದ ಶ್ರೀ ಸಿದ್ದರಾಯ ಯಲ್ಲಡಗಿ, ಶ್ರೀ ಶಾಮ ಪೂಜಾರಿ, ಶ್ರೀ ಗುರು ದಶ್ಯಾಳ, ಗ್ರಾ. ಪಂ. ಅಧ್ಯಕ್ಷರಾದ ಶ್ರೀಮತಿ ಶಕುಂತಲಾ ಪಾಟೀಲ, ಶ್ರೀ ಬಸವಂತ ಗುಡ್ಡಾಪುರ,ಅಡಹಳ್ಳಿ ಹಿರಿಯ ಮುಖಂಡರಾದ ಶ್ರೀ ಶೇಖರ ನೇಮಗೌಡರ,ಶ್ರೀ ಶಿವು ತೇಲಿ, ಶ್ರೀಮತಿ ಶಾಂತಾಬಾಯಿ ಶೆಟ್ಟಿ, ಶ್ರೀ ನೂರಅಹಮದ್ ಢೋಂಗರಗಾವ,ಶ್ರೀ ಬಸನಗೌಡ ಬಿರಾದರ, ಶ್ರೀ ಪ್ರಹ್ಲಾದ ಪಾಟೀಲ,ಶ್ರೀ ಸುಶೀಲಕುಮಾರ ಪತ್ತಾರ, ಅಥಣಿ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ ಶಿವಾನಂದ ಕಲ್ಲಾಪುರ, ಶ್ರೀ ರವೀಂದ್ರ ಮುರಗಾಲಿ ಎ, ಇ, ಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಕ್ಷೇತ್ರದ ಹಲವಾರು ಗ್ರಾಮಗಳ ಹಿರಿಯ ಮುಖಂಡರು ಮತ್ತು ರೈತರು ಹಾಗೂ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.
ವರದಿ ವಿಠ್ಠಲ ಖೋಕಾಟೆ ಅಥಣಿ



















