ಕೊಪ್ಪಳ/ ಕಾರಟಗಿ : ಪುರಸಭೆಯಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಸ್ವಚ್ಚತಾ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ನೇರ ಪಾವತಿಗೆ ಒಳಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ ನೇತೃತ್ವದಲ್ಲಿ ನಡೆಸುತ್ತಿರುವ ಹೋರಾಟ ಆರನೇ ದಿನಕ್ಕೆ ಮುಂದುವರೆದಿದೆ ಎಂದು AICCTU ಜಿಲ್ಲಾ ಅಧ್ಯಕ್ಷರಾದ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಮಿಕರ ಹೋರಾಟಕ್ಕೆ ರೈತ ಸಂಘ ಕಲ್ಯಾಣ ಕರ್ನಾಟಕ ಹಾಗೂ ಅಸಿರು ಸೇನೆ ರಾಜ್ಯಾಧ್ಯಕ್ಷರಾದ ರಾಮಣ್ಣ ಜಾಡಿ ಬೆಂಬಲ ವ್ಯಕ್ತಪಡಿಸಿ ಈ ಕಾರ್ಮಿಕರಿಗೆ ನ್ಯಾಯ ಸಿಗುವವರೆಗೆ ನಾವು ಈ ಕಾರ್ಮಿಕರಿಗೆ ಬೆಂಬವಾಗಿ ನಿಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ರೈತ ಸಂಘ ಕಲ್ಯಾಣ ಕರ್ನಾಟಕ ಹಾಗೂ ಹಸಿರು ಸೇನೆ ಕಾರಟಗಿ ತಾಲ್ಲೂಕು ಅಧ್ಯಕ್ಷರಾದ ಸಿದ್ದು ಪನ್ನಾಪುರ, ದುರುಗಪ್ಪ ಸಾಲೋಣಿ, ಬಸವರಾಜ ಸಾಲೋಣಿ, AICCTU ಜಿಲ್ಲಾ ಸಮಿತಿ ಸದಸ್ಯರಾದ ಸಣ್ಣ ಹನುಮಂತಪ್ಪ ಹುಲಿಹೈದರ, ಸಣ್ಣ ದೆವಪ್ಪ, ಹನುಮಂತಿ, ಅಯ್ಯಮ್ಮ, ಮಹಾಕಾಂಳೆಮ್ಮ, ಹುಲಿಗೇಮ್ಮ, ಮರಿಯಮ್ಮ, ದುರುಗಮ್ಮ, ಕವಿತಮ್ಮ, ಹುಲಿಗೇಮ್ಮ, ಹನುಮಮ್ಮ, ಲಕ್ಷ್ಮಮ್ಮ, ಜಲಾಲೇಮ್ಮ, ಶೇಖರಪ್ಪ ಇತರರು ಇದ್ದರು.
- ಕರುನಾಡ ಕಂದ



















