ಬಳ್ಳಾರಿ/ ಕಂಪ್ಲಿ: ಕರ್ನಾಟಕ ರಕ್ಷಣಾ ವೇದಿಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಶಂಕ್ರಪ್ಪ ಅಂಗಡಿಯವರ ಜನ್ಮದಿನದ ಅಂಗವಾಗಿ ಕಂಪ್ಲಿ ತಾಲೂಕು ಅಧ್ಯಕ್ಷ ಸಿ.ಡಿ.ರಾಜಶೇಖರ ನೇತೃತ್ವದಲ್ಲಿ ಪದಾಧಿಕಾರಿಗಳು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಬುಧವಾರ ವಿತರಿಸಲಾಯಿತು. ನಂತರ ತಾಲೂಕಾಧ್ಯಕ್ಷ ಸಿ.ಡಿ.ರಾಜಶೇಖರ ಮಾತನಾಡಿ, ಜಿಲ್ಲಾಧ್ಯಕ್ಷ ಶಂಕ್ರಪ್ಪ ಅಂಗಡಿ ಇವರು ಕನ್ನಡದ ನೆಲ, ಜಲ, ಭಾಷೆಯ ಉಳಿವಿಗಾಗಿ ಜಿಲ್ಲೆಯಲ್ಲಿ ಸಾಕಷ್ಟು ಹೋರಾಟದ ಜೊತೆ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳೊಂದಿಗೆ ಸಮಾಜಸೇವೆ ಮಾಡಿಕೊಂಡು ಬಂದಿದ್ದು, ಇಂತಹ ಸಮಾಜ ಸೇವಕರಾದ ಶಂಕ್ರಪ್ಪ ಅವರ ಜನ್ಮದಿನದ ನಿಮಿತ್ಯವಾಗಿ ಕಂಪ್ಲಿ ನಗರದಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿತರಿಸಲಾಯಿತು. ಜಿಲ್ಲಾಧ್ಯಕ್ಷರಿಗೆ ಇನ್ನಷ್ಟು ಸಮಾಜದ ಸೇವೆ ಮಾಡಲು ಶಕ್ತಿ ನೀಡುವ ಜತೆಗೆ ಸದಾ ಆಯಸ್ಸು, ಆರೋಗ್ಯ ವೃದ್ಧಿಸಲಿ ಎಂದರು. ಈ ವೇಳೆ ವೈದ್ಯರಾದ ಡಾ.ಮಲ್ಲೇಶಪ್ಪ, ತಾಲೂಕು ಉಪಾಧ್ಯಕ್ಷ ವಿ.ಮೌನೇಶ, ಸಂಘಟನಾ ಕಾರ್ಯದರ್ಶಿ ಸುಗ್ಗೇನಹಳ್ಳಿ ಜಡೆಪ್ಪ, ಕಾರ್ಯದರ್ಶಿ ಆರ್.ವೀರೇಶ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಕಂಬಳಿ ರಾಮಕೃಷ್ಣ, ನಗರ ಘಟಕ ಅಧ್ಯಕ್ಷ ಜಂಗ್ಲಿ ನಾಗರಾಜ, ವಿದ್ಯಾರ್ಥಿ ಘಟಕ ಅಧ್ಯಕ್ಷ ಮುನ್ನಾ, ಪದಾಧಿಕಾರಿಗಳಾದ ಪ್ರಕಾಶ್ ಖಂಡೇಲ್ವಾಲ್, ಜೀರ್ ಗಣೇಶ, ರಾಘು, ವಿ.ಬಿ.ನಾಗರಾಜ, ವೀರನಗೌಡ, ಹರೀಶ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















