ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಶ್ವಜ್ಯೋತಿ ವಿಶ್ವರಾಧ್ಯರಿಗೆ ತೊಟ್ಟಿಲು ಕಾರ್ಯಕ್ರಮ

ಕಲಬುರಗಿ ಜಿಲ್ಲೆ ಕಾಳಗಿಯ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ರೇವಗ್ಗಿ ರಟಕಲ್ ಗುಡ್ಡದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳ ಪರ್ಯಂತ ಪುರಾಣ ಕಾರ್ಯಕ್ರಮ ನಡೆದು ಬರುತ್ತಿದ್ದು 11ನೇ ದಿನದ ಈ ಪುರಾಣ ಕಾರ್ಯಕ್ರಮದಲ್ಲಿ ವಿಶ್ವ ಜ್ಯೋತಿ ವಿಶ್ವರಾಧ್ಯರ ತೊಟ್ಟಿಲು ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮಕ್ಕೆ ನೂರಾರು ಮುತ್ತೈದೆಯರು ಆಗಮಿಸಿ ತೊಟ್ಟಿಲು ತೂಗುತ್ತಾ ಜೋಗುಳ ಪದ ಹಾಡಿದರು.
ರೇವಣಸಿದ್ದೇಶ್ವರರ ಭಕ್ತಾದಿಗಳು ದೂರ ದೂರದ ಹಳ್ಳಿಗಳಿಂದ ಆಗಮಿಸಿ ರೇವಣಸಿದ್ದೇಶ್ವರನ ದರ್ಶನ ಪಡೆದು ವಿಶ್ವಜ್ಯೋತಿ ವಿಶ್ವರಾಧ್ಯರ ಪುರಾಣವನ್ನು ಕೇಳಿ ಪುನೀತರಾದರು.
ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿಕೊಂಡಿದ್ದ ಪರಮಪೂಜ್ಯ ಷಟ್ಪದಿ ಬ್ರಹ್ಮ ರೇವಣಸಿದ್ದ ಶಿವಾಚಾರ್ಯರ ರೇವಣಸಿದ್ದೇಶ್ವರ ಹಿರೇಮಠರಟಕಲ್ ಭಕ್ತರಿಗೆ ಆಶೀರ್ವಚನ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ನಾಗನಾಥ ತರ್ಗೆ ತಹಶೀಲ್ದಾರರು ಸೇಡಂ ಅವರು ವಹಿಸಿಕೊಂಡಿದ್ದರು.
ಪುರಾಣಿಕರಾದ ಮಹಾಲಿಂಗಯ್ಯ ಹಿರೇಮಠ ಪಡದಳ್ಳಿ ಮತ್ತು ಸಂಗೀತಗಾರರಾದ ಮಹಾದೇವಯ್ಯ ಸ್ವಾಮಿ ಎಂಪಳ್ಳಿ, ತಬಲಾ ವಾದಕರಾದ ಶಿವಕುಮಾರ ಸ್ವಾಮಿ ಉಡುಮನಹಳ್ಳಿ ಸೇರಿದಂತೆ ಎಲ್ಲರಿಂದ ಕಾರ್ಯಕ್ರಮ ಬಹಳ ಸುಂದರವಾಗಿ ಮೂಡಿ ಬರುತ್ತಾ ಇದೆ.
ಪುರಾಣ ಕಾರ್ಯಕ್ರಮದಲ್ಲಿ ರೇವಣಸಿದ್ದೇಶ್ವರ ದೇವಸ್ಥಾನದ ಕಾರ್ಯದರ್ಶಿಗಳಾದ ಸದಾಶಿವ ವಗ್ಗೆ, ನಾಗೇಶ್ ಬಿರಾದಾರ, ದೇವಸ್ಥಾನದ ಅರ್ಚಕರು ಹಾಗೂ ಸುತ್ತ ಮುತ್ತಲಿನ ಅನೇಕ ಗ್ರಾಮಗಳ ಭಕ್ತಾದಿಗಳು ಭಾಗಿಯಾಗಿದ್ದಾರೆ
ಈ ಕಾರ್ಯಕ್ರಮವನ್ನು ವೀರಣ್ಣ ಗಂಗಾಣಿ ರಟಕಲ್ ನಿರೂಪಿಸಿದರು.

ವರದಿ : ಚಂದ್ರಶೇಖರ್ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!