ಬೆಳಗಾವಿ/ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಯುವ ಕರ್ನಾಟಕ ಭೀಮ್ ಸೇನೆ ಶಕ್ತಿ ಸಂಘಟನೆಯ ನೇತೃತ್ವದಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರವರ ಮೂರ್ತಿ ಉದ್ಘಾಟನೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ಪೂಜ್ಯ ಶ್ರೀ ನಿಜಗುಣಾನಂದ ಮಹಾ ಸ್ವಾಮಿಜಿಗಳು ಬೈಲೂರು ಮುಂಡರಗಿ ಇವರಿಗೆ ಬುದ್ಧ ಬಸವ ಅಂಬೇಡ್ಕರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ಮಾರುತಿ ಕೆಳಗೇರಿಯವರಿಂದ ಪೂಜ್ಯರಿಗೆ ಬುದ್ಧ ಬಸವ ಅಂಬೇಡ್ಕರವರ ಭಾವ ಚಿತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಾ ಪ್ರಶಾಂತ್ ರಾವ್ ಐಹೊಳೆ, ಲಕ್ಷ್ಮಿ ಅಕ್ಕಾ ಇನಾಮದಾರ, ಪ್ರವೀಣ ಮಾದರ, ಉದಯ ಬಸೋಜಿ, ಮಲ್ಲೇಶ ಹೆಗಡೆ, ಭೀಮರಾವ್ ತಳವಾರ, ದಲಿತ ಮುಖಂಡರು, ಹಾಗೂ ನೇಗಿನಹಾಳ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.
ವರದಿ ಮಂಜು .ಎಂ.ಚಿಕ್ಕಣ್ಣವರ



















