ಧಾರವಾಡ: ಗಾಮನಗಟ್ಟಿಯ ಗ್ರಾಮದ ಭಕ್ತರಿಂದ ಶ್ರಾವಣ ಮಾಸದ ಕಡೆಯ ಸೋಮವಾರದ ಪ್ರಯುಕ್ತವಾಗಿ ಧಾರವಾಡ ಜಿಲ್ಲೆಯ ನವನಗರ ಸಮೀಪದ ಗಾಮನಗಟ್ಟಿಯ ಗ್ರಾಮದ ಭಕ್ತಾದಿಗಳು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪುಣ್ಯಕ್ಷೇತ್ರ ಮುರಗೋಡದ ಪವಿತ್ರಮಠವಾದ ಶ್ರೀ ಚಿದಂಬರೇಶ್ವರ ಮಠಕ್ಕೆ ಮುಂಜಾನೆ 4:00 ಕ್ಕೆ ಪಾದಯಾತ್ರೆ ಪ್ರಾರಂಭವಾಗಿ ಧಾರವಾಡದಿಂದ ಬೈಲಹೊಂಗಲ ಮಾರ್ಗ ಮುಖಾಂತರವಾಗಿ ಅಲ್ಲಲ್ಲಿ ಪ್ರಮುಖ ಸ್ಥಳಗಳಲ್ಲಿ ನಿಂತು ನೀರು ಮತ್ತು ಊಟ ಮಾಡಿ ಹಾಗೂ ದಾರಿ ಉದ್ದಕ್ಕೂ ಹಾಡು, ಮಂತ್ರ ಭಜನೆ, ಪಾಠ ಮಾಡಿಕೊಂಡು ಸರಿಯಾಗಿ ಶ್ರೀ ಚಿದಂಬರೇಶ್ವರ ಮಠಕ್ಕೆ ರಾತ್ರಿ 12:00 ಗಂಟೆಗೆ ಸಮಯ ತಲುಪುತ್ತೇವೆ ಎಂದು ಪಾದಯಾತ್ರೆಯ ಮುಖ್ಯಸ್ಥರು ಗುರು ಚಿದಂಬರ ಅವರು ಮಾಹಿತಿಯನ್ನು ಹಂಚಿಕೊಂಡರು.
ವರದಿ : ಉಮೇಶ ಗೌಡರ



















