ಕೊಪ್ಪಳ / ಗಂಗಾವತಿ : ಬಸವ ಪರ ಸಂಘಟನೆಗಳು ವತಿಯಿಂದ ಗಂಗಾವತಿಯ ನಗರದಲ್ಲಿ ಮನೆ ಮನೆಗಳಿಂದ ಮನಮನಗಳಿಗೆ ವಚನ ಸಂದೇಶ ಸಾರುವ ವಚನ ಶ್ರಾವಣ ಕಾರ್ಯಕ್ರಮದಲ್ಲಿ ನಿಜ ಶಿವಶರಣ ಅಂಬಿಗರ ಚೌಡಯ್ಯನವರ ವಚನದ ಕುರಿತು ಕಂಪ್ಲಿ ತಾಲೂಕಿನ ಎಮ್ಮಿಗನೂರು ಸರಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ಎಸ್ ರಾಮಪ್ಪ ಉಪನ್ಯಾಸ ನಡೆಸಿಕೊಟ್ಟರು.
12ನೇ ಶತಮಾನದಲ್ಲಿ ವಿಶಿಷ್ಟವಾದ ಮತ್ತು ಭಿನ್ನ ವ್ಯಕ್ತಿತ್ವವನ್ನು ಹೊಂದಿದಂತಹ ವಚನಕಾರರಲ್ಲಿ ಅಂಬಿಗರ ಚೌಡಯ್ಯನವರು ಬಸವಣ್ಣನವರೊಂದಿಗೆ ಅನುಭವ ಮಂಟಪದಲ್ಲಿ ಸಮಕಾಲೀನರಾಗಿ ಅಂಬಿಗ ವೃತ್ತಿಯೊಂದಿಗೆ ಸಮಾಜವನ್ನು ತಿದ್ದುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಆದರ್ಶ ಪುರುಷ ಶಿವಶರಣ ಎನಿಸಿಕೊಂಡವರು ಸ್ವಾರ್ಥ ಮೋಸ ವಂಚನೆ ದಾಂಬಿಕತನವನ್ನು ಹೊಂದದೆ ಸಮಾಜದ ಜನರಿಗೆ ಆದರ್ಶಪ್ರಾಯನಾಗಿರಬೇಕು ಅಲ್ಲದೆ ಪರದನ ಪರಸ್ತ್ರೀಗಳಿಗೆ ಮಾರುಹೋಗದೆ ತಾನು ಮಾಡುವ ಕಾಯಕದಲ್ಲಿ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕು ಆ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರು ಯಾವುದನ್ನೇ ಆಗಲಿ ಯಾರೇ ಆಗಲಿ ಟೀಕಿಸದೆ ಬಿಡುವ ಸ್ವಭಾವ ಅವರದಾಗಿರಲಿಲ್ಲ ನಿಷ್ಠುರ ನುಡಿಗಳಿಂದ ಅವರನ್ನು ತಿದ್ದುವ ಕಾಯಕ ಮಾಡುತ್ತಿದ್ದರು ಪ್ರಸ್ತುತ ದಿನಮಾನಕ್ಕೂ ಕೂಡ ಬಸವಾದಿ ಶಿವಶರಣರು ಹಾಕಿಕೊಟ್ಟಿರತಕ್ಕಂತ ವಚನ ಸಾಹಿತ್ಯ ನಮ್ಮೆಲ್ಲರಿಗೂ ಕೂಡ ದಾರಿದೀಪ ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ರಾಜಪ್ಪ ಸಿದ್ದಾಪುರ ಪಂಪಣ್ಣ ಪಟ್ಟಣಶೆಟ್ಟಿ ಶ್ರೀಶೈಲ್ ಮಹೇಶ್ ಕುಮಾರ್ ದಿಲೀಪ್ ಬಸವರಾಜ್ ಸೇರಿದಂತೆ ಶಿವಶರಣರು ಇತರರು ಭಾಗಿಯಾಗಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















