
ಯಾದಗಿರಿ/ ಗುರುಮಠಕಲ್: ಪಟ್ಟಣದ ಉಪ್ಪರಗಡ್ಡ ಬಡಾವಣೆಯ ಸುಮಾರು ನೂರಕ್ಕಿಂತ ಹೆಚ್ಚು ಇತಿಹಾಸ ಉಳ್ಳ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಜಾತ್ರೆ ಇಂದು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ನಿನ್ನೆ ರಾತ್ರಿಯಿಡೀ ದೇವಸ್ಥಾನದಲ್ಲಿ ಭಜನೆ ಜರುಗಿತು. ಇಂದು ಬೆಳಿಗ್ಗೆಯಿಂದಲೇ ಪೂಜಾ ಅಭಿಷೇಕ ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಲ್ಲಕಿ ಸೇವಾ ಜರುಗಿತು.
ಜಾತ್ರೆಗೆ ತೆಲಂಗಾಣ ಮತ್ತು ಗುರುಮಠಕಲ್ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡರು, ಬಂದ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಈ ಜಾತ್ರೆಯ ವಿಶೇಷ ಆಕರ್ಷಣೆ ಕೈಕೈ ಕುಸ್ತಿ ಪಂದ್ಯ, ಗ್ರಾಮೀಣ ಭಾಗದ ರೈತರ ನೆಚ್ಚಿನ ಆಟ, ಕೈ ಕುಸ್ತಿ ಕ್ರಾರ್ಯಕ್ರಮ ಮುಂಜಾನೆಯಿಂದ ಸಾಯಂಕಾಲವರೆಗೆ ಜರುಗಿತು, ಪಂದ್ಯದಲ್ಲಿ ಗೆದ್ದವರಿಗೆ ಪ್ರ-ಪ್ರಥಮ ಕೈ ಕುಸ್ತಿಯಲ್ಲಿ ಕೈ ಕುಸ್ತಿಯಲ್ಲಿ 3 ಜನರನ್ನು ಸೋಲಿಸಿದವರಿಗೆ 5 ತೊಲಿಯ ಬೆಳ್ಳಿಯ ಕಡಗ, ನಂತರ ಎರಡನೇ ಬಾರಿ 3 ಜನರನ್ನು ಸೋಲಿಸಿದವರಿಗೆ ಟೆಂಗಿನ ಕಾಯಿ, 1/2 (ಅರ್ಧ) ತೊಲಿಯ ಬೆಳ್ಳಿಯ ಉಂಗುರ, ಹಾಗೂ 4 ಜನರನ್ನು ಸೋಲಿಸಿದವರಿಗೆ 5 ತೊಲಿ ಬೆಳ್ಳಿಯ ಕಡಗ ಬಹುಮಾನ ಕೊಡಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಡಳಿಯವರು ತಿಳಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















