ಬಾಗಲಕೋಟೆ/ಇಲಕಲ್ಲ:ವಿದ್ಯಾರ್ಥಿಗಳು ಶೈಕ್ಷಣಿಕ ರಂಗದಲ್ಲಿ ಎಷ್ಟೇ ಸಾಧನೆ ಮಾಡಿದರು ತಮ್ಮ ತಂದೆ ತಾಯಿಗಳನ್ನು ಮರೆಯಬಾರದು ಎಂದು ನಿವೃತ್ತ ಶಿಕ್ಷಕ ಅಮರೇಶ ಐಹೊಳ್ಳಿ ಹೇಳಿದರು.
ನಗರದ ಎಸ್.ಆರ್.ಕಂಠಿ ವೇದಿಕೆ ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾದ ಪ್ರತಿಭಾವಂತ ವಿದ್ಯಾರ್ಥಿ ರೋಹನ್ ಜೋಗಿನ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಮೆರಿಟ್ ಮೂಲಕ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿ ಬಸವೇಶ ಕೊತಬಾಳ ಇವರ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಂದೆ ತಾಯಿ,ಗುರುಗಳ ಶ್ರಮವನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳಬೇಕು. ತಂದೆ ತಾಯಿ ತ್ಯಾಗದ ಫಲವಾಗಿ ಮಕ್ಕಳ ಭವಿಷ್ಯ ರೂಪಿತವಾಗಿರುತ್ತದೆ. ತಮ್ಮ ಇಡೀ ಬದುಕನ್ನು ಮಕ್ಕಳ ಬದುಕಿಗಾಗಿ ಸವೆಸಿದ ತಂದೆ ತಾಯಿಗಳ ಕಣ್ಣಲ್ಲಿ ನೀರು ತರಿಸಬಾರದು ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ನಗರ ಚಾಲಕರ ಘಟಕದ ಅಧ್ಯಕ್ಷ ಮಲ್ಲಪ್ಪ ಅಂಗಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಠಿ ವೇದಿಕೆ ಅಧ್ಯಕ್ಷೆ ಮಹಾದೇವಿ ತೊಂತನಾಳ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಲಕ್ಷ್ಮಣ ಚಲವಾದಿ,ವೆಂಕಟೇಶ ಜೋಗಿನ,
ಮಂಜುನಾಥ ಜೋಗಿನ,
ಕಂಠಿ ವೇದಿಕೆಯ ಬಸವರಾಜ ಚಳಗೇರಿ,
ಚನ್ನಪ್ಪ ಲವಳಸರ,ಮಹಾಂತೇಶ ಕಕ್ಕಸಗೇರಿ,ಅಡಿವೆಪ್ಪ ಅಂಗಡಿ, ಶರಣಪ್ಪ ಕೊತಬಾಳ,ಬಸವರಾಜ ಗುಗ್ಗರಿ,
ಮಲ್ಲಿಕಾರ್ಜುನ ನೀರಲಕೇರಿ,
ಮಹಾಂತೇಶ ಬಂಡಿ, ಶರಣಬಸವ
ನಾಲವಾಡದ, ಶಕುಂತಲಾ ಜೋಗಿನ,
ಭಾಗ್ಯಶ್ರೀ ಜೋಗಿನ,ಮಹಾಂತಮ್ಮ ಹೂಲಗೇರಿ ಮತ್ತಿತರರು ಭಾಗವಹಿಸಿದ್ದರು.
ನೀಲಾಂಬಿಕಾ ಬಾದಿಮನಾಳ ಪ್ರಾರ್ಥಿಸಿದರು. ಶ್ರೀಧರ ಜೋಗಿನ ಸ್ವಾಗತಿಸಿದರು. ವಿಜಯಲಕ್ಷ್ಮೀ ಲೆಕ್ಕಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸವರಾಜ ಅಂಗಡಿ(ಐಟಿಐ) ನಿರೂಪಿಸಿದರು. ವಿಜಯಲಕ್ಷ್ಮೀ ಕಂಠಿ ವಂದಿಸಿದರು.
- ಕರುನಾಡ ಕಂದ



















