ಬಳ್ಳಾರಿ / ಕಂಪ್ಲಿ :ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ವಿಜಯದಶಮಿ ಅಂಗವಾಗಿ ಪಥಸಂಚಲನ ನಡೆಸಿದರು. ಮಾರ್ಗದುದ್ದಕ್ಕೂ ಜನ ಹೂಮಳೆಗೆರೆದು ಸ್ವಾಗತಿಸಿದರು.
ಪಥ ಸಂಚಲನ ಡಾ. ಬಿ. ಆರ್. ಅಂಬೇಡ್ಕರ್ ವೃತ್ತ, ಉದ್ಭವ ಗಣೇಶ ಗುಡಿ, ಗಂಗಾನಗರ, ತಳವಾರ್ ಓಣಿ, ರಾಮದೇವರ ಗುಡಿ, ಸಂತೆ ಮಾರ್ಕೆಟ್, ಸರಕಾರಿ ಆಸ್ಪತ್ರೆ ಪುನೀತ್ ರಾಜಕುಮಾರ್ ರಸ್ತೆ ಎಸ್. ಎನ್. ಪೇಟೆ ಮೈದಾನಕ್ಕೆ ಮರಳಿ ಬಂದಿತು.
ಪಥ ಸಂಚಲನ ಸಾಗಿ ಬಂದ ಈ ಮಾರ್ಗದಲ್ಲಿ ನೀರು ಹಾಕಿ ರಂಗೋಲಿ, ಪುಷ್ಪ ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಪಥ ಸಂಚಲನದ ಸದಸ್ಯರು ಗಣ ವೇಷಧಾರಿಗಳಾಗಿ ಗಮನ ಸೆಳೆದರು.
ವರದಿ : ಜಿಲಾನಸಾಬ್ ಬಡಿಗೇರ್




















