ಕಾರವಾರ : ಸ್ವಚ್ಛತೆ ,ಶ್ರಮದಾನದಿಂದ ಶರೀರ ಗಟ್ಟಿ, ಮನಸ್ಸು ಪವಿತ್ರವಾಗಿರುತ್ತದೆ ಎಂದು ಕಾರವಾರದ ರಾಮಕೃಷ್ಣ ಆಶ್ರಮದ ಶ್ರೀ ಭವೇಶಾನಂದ ಸ್ವಾಮೀಜಿ ಭಾರತಾಂಬೆಗೆ ಪುಷ್ಪಾರ್ಚನೆ ಮಾಡಿ ಸನ್ಮಾನ ಸ್ವೀಕರಿಸಿ ಹಿತವಚನ ನೀಡಿದರು. ಅವರು ತಾಲೂಕಿನ ಕಡವಾಡ ಗ್ರಾಮದ ಮಹಾದೇವರ ಸಭಾಂಗಣದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ, ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕಡವಾಡ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದು ನಾಯ್ಕ್ ತಮ್ಮೆಲ್ಲರ ಸೇವಾ ಮನೋಭಾವನೆಯಿಂದ ಒಗ್ಗಟ್ಟಿನಿಂದ ಇವತ್ತಿನ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ನುಡಿದರು. ಭಗವಂತನ ಸೇವೆ ಮಾಡುವಂತೆ ದೇಶ ಸೇವೆ ಮಾಡಬೇಕು ಎಂದು ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ ನೇತೃತ್ವದಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ 15 ದಿನಗಳ ಕಾಲ ಕಡವಾಡ ಗ್ರಾಮದಲ್ಲಿ ಸ್ವಚ್ಛತಾ,ಶ್ರಮದಾನ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಗ್ರಾಪಂ ಸದಸ್ಯ ಕಿಶೋರ್ ಕಡವಾಡಕರ್. ಗುನಗಿ ಸಮಾಜದ ಬುದ್ಧಿವಂತ ಡಿಂಗಾ ಗುನಗಿ. ಸತೀಶ್ ತಳೇಕರ,ಅನಿಲ್ ಮಾಂಜೇಕರ್, ಸೂರಜ್ ದೇಸಾಯಿ ಉಪಸ್ಥಿತರಿದ್ದರು. ಸನ್ಮಾನ ಕಾರ್ಯಕ್ರಮ ವೇದಿಕೆಯಲ್ಲಿ ಕಡವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಕಿರಣ್ ಕುಮಾರ್ ನಾಯ್ಕ್, ರಜಿನಿ ನಾಯ್ಕ್ , ಗ್ರಾಪಂ ಅಧ್ಯಕ್ಷ ಆನಂದು ನಾಯ್ಕ್, ಮಾಜಿ ಗ್ರಾಮ,ಪಂ ಅಧ್ಯಕ್ಷ ಮಹೇಶ್ ದೇವಳಿ, ಮಹಾದೇವ ನಾಯ್ಕ್,ಪ್ರಶಾಂತ್ ನಾಯ್ಕ್. ಬಾಳ ಭೋವಿ, ದಾಮೋದರ್ ಗುನಗಿ, ನಂದನ ಮಾಂಜೆರ್ಕರ್, ಹಾಗೂ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ ಬಿಜೆಪಿ ಗ್ರಾಮೀಣ ಮಂಡಲದ ಪದಾಧಿಕಾರಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದೇವಿದಾಸ್ ತಳೆಕರ್ ಸ್ವಾಗತಿಸಿ, ವಂದಿಸಿದರು.
- ಸುಶಾಂತ್ ಭೋವಿ



















