ಬಳ್ಳಾರಿ / ಕಂಪ್ಲಿ : ಪಟ್ಟಣದ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯ ವಿನೂತನ ಕಾರ್ಯಕ್ರಮವಾಗಿರುವ ಮನೆ – ಮನೆಗೆ ಪೊಲೀಸ್, ಕ್ಲಸ್ಟರ್ ಮುಖ್ಯಸ್ಥರ ಸಭೆ ಜರುಗಿತು.
ಕಂಪ್ಲಿ ಪೊಲೀಸ್ ಠಾಣೆಯ ಪಿಐ ಕೆ.ಬಿ.ವಾಸುಕುಮಾರ ಸಭೆಯನ್ನುದ್ದೇಶಿಸಿ ಮಾತನಾಡಿ, ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿರಬೇಕೆನ್ನುವ ನಿಟ್ಟಿನಲ್ಲಿ ಇಲಾಖೆಯು ಸಾರ್ವಜನಿಕರಿಗಾಗಿ, ಅವರ ಒಳಿತಿಗಾಗಿ ವಿನೂತನ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದು, ಇದರ ಅನ್ವಯ ತಾಲ್ಲೂಕಿನ ಎಲ್ಲಾ ಗ್ರಾಮಗಳಿಗೆ ಒಬ್ಬೊಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಅವರಿಗೆ ನೆರವಾಗಲು ಆಯಾ ಗ್ರಾಮಗಳಲ್ಲಿ 50 ಮನೆಗಳಿಗೆ ಒಬ್ಬರಂತೆ ಮುಖ್ಯಸ್ಥರನ್ನು ನೇಮಿಸಿದ್ದು, ಗ್ರಾಮಗಳ ಮುಖ್ಯಸ್ಥರು ಹಾಗೂ ಗ್ರಾಮಕ್ಕೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ, ಸದಾ ಶಾಂತಿ, ನೆಮ್ಮದಿ ನೆಲಸುವಂತೆ ನೋಡಿಕೊಳ್ಳಬೇಕು ಎಂದರು ವಿವರಿಸಿದ ಅವರು ಪೊಲೀಸ್ ಇಲಾಖೆ ಸುಗಮ ಆಡಳಿತ ಶಾಂತಿ ಸುವ್ಯವಸ್ಥೆಗಾಗಿ ನೇಮಿಸಿದ ಮುಖ್ಯಸ್ಥರು ಯಾವುದೇ ಕಾರಣಕ್ಕೂ ದ್ವೇಷ ಸಾಧಿಸದೇ ಎಲ್ಲರಿಗೂ ಬೇಕಾದ ವ್ಯಕ್ತಿಯನ್ನು ಮಾತ್ರ ನೇಮಿಸಲಾಗಿದ್ದು, ಮುಖ್ಯಸ್ಥರು ಸಹಿತ ಅದೇ ರೀತಿ ನಡೆದುಕೊಳ್ಳಬೇಕೆಂದರು.
ನಂತರ ವಿವಿಧ ಗ್ರಾಮಗಳಿಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿಗಳು ತಮಗೆ ನಿಗಧಿ ಪಡಿಸಿದ ಗ್ರಾಮಗಳಿಗೆ ಖುದ್ದಾಗಿ ತೆರಳಿ ಆ ಗ್ರಾಮದ ಪ್ರತಿಯೊಂದು ಮನೆಗೆ ತೆರಳಿ ಆ ಮನೆಯ ಮುಖ್ಯಸ್ಥರ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ, ಅವರಿಗಿರುವ ಸಮಸ್ಯೆಗಳನ್ನು, ಅರಿತೊಕೊಂಡು ಅವುಗಳ ಪರಿಹಾರಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು, ಸಮಸ್ಯೆಗಳು ಗಂಭೀರವಾಗಿದ್ದರೆ, ಅವುಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಿದರಲ್ಲದೆ, ಗ್ರಾಮಗಳಿಗೆ ಯಾವುದಾರೂ ಹೊಸ ವ್ಯಕ್ತಿಗಳು , ಸಂಶಯಾಸ್ಪದ ವ್ತಕ್ತಿಗಳು ಬಂದರೆ ಮುಖ್ಯಸ್ಥರು ಪೊಲೀಸರ ಗಮನಕ್ಕೆ ತರಬೇಕು, ಅಹಿತಕರ ಘಟನೆಗಳು ನಡೆಯುವ ಸಂಭವವಿದ್ದರೆ ಅದನ್ನು ಪೊಲೀಸರ ಗಮನಕ್ಕೆ ತರಬೇಕು ಎಂದು ಸೂಚಿಸಿದರಲ್ಲದೆ, ಒಟ್ಟಾರೆ ಕಂಪ್ಲಿ ಠಾಣೆ ವ್ಯಾಪ್ತಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.
ಈ ಸಂದರ್ಭದಲ್ಲಿ ಎಎಸ್ಐ ಬಸವರಾಜ, ಮುಖ್ಯ ಪೇದೆಗಳು, ಪೇದೆಗಳು, ವಿವಿಧ ಗ್ರಾಮಗಳ ಕ್ಲಸ್ಟರ್ ಮುಖ್ಯಸ್ಥರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















