ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಂಜಾರ ಸಮುದಾಯದ ವಿಶಿಷ್ಠ ದೀಪಾವಳಿ ಸಂಭ್ರಮ

ಗುರುಮಠಕಲ್/ಯದ್ಲಾಪುರ ತಾಂಡಾ: ತಾಲೂಕಿನ ಯದ್ಲಾಪುರ ಕಮಲ್ ನಗರ ತಾಂಡಾದಲ್ಲಿ ಬಂಜಾರ ಸಮಾಜದವರು ದೀಪಾವಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ.

ಹಬ್ಬದ ಪೂರ್ವದಲ್ಲಿ ಸುಮಾರು 15 ದಿನಗಳ ಕಾಲ ಊರಿನ ತರುಣಿಯರು ಪ್ರತಿ ದಿನ ರಾತ್ರಿ ತೆರಳಿ ನಾಯಕರ ಮನೆಗಳ ಮುಂದೆ ಸಾಂಪ್ರದಾಯಿಕ ಜನಪದ ನೃತ್ಯ ಮಾಡುತ್ತಾರೆ ಮತ್ತು ಪಾರಂಪರಿಕ ಬಂಜಾರ ಹಾಡುಗಳನ್ನು ಹಾಡುತ್ತಾರೆ. ಈ ಸಂದರ್ಭದಲ್ಲಿ “ದಾಡೆರ ಕೊರ ದವಾಳಿ ಸೇವಾಲಾಲ್ ಬಾಪು ತೂನ ಮೇರಾ ಮರೀಯ್ಯಮ್ಮ ಯಡಿ ತೂನ್ ಮೇರಾ” ಎಂಬಂತೆ ಬಂಜಾರ ಪದಗಳಲ್ಲಿ ಹಾಡುಗಳನ್ನು ಹಾಡಿ ಉತ್ಸಾಹ ತುಂಬುತ್ತಾರೆ.

ದೀಪಾವಳಿಯಂದು ಪ್ರತಿಯೊಂದು ಮನೆಗೆ ತೆರಳಿ ಆರತಿ ಬೆಳಗಿಸುವ ಮೂಲಕ ಮತ್ತು ಹಾಡಿನ ಮೂಲಕ “ದೀಪಾವಳಿ ಹಬ್ಬದ ನಿಮಗೆ ಶುಭವಾಗಲಿ” ಎಂದು ಹಾರೈಸುವ ಪರಂಪರೆ ಇಲ್ಲಿನ ವಿಶಿಷ್ಟತೆ. ಈ ಸಾಂಪ್ರದಾಯಿಕ ಆಚರಣೆ ತಾಂಡಾದ ಬಂಜಾರರ ಲೋಕಗೀತೆಯ ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿದೆ ಎಂದು ಸ್ಥಳೀಯ ನಿವಾಸಿ ಭೂಪಾಲ್ ತಿಳಿಸಿದ್ದಾರೆ.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!