ಕಲಬುರಗಿ/ ಚಿಂಚೋಳಿ : ಪಟ್ಟಣದ ಚಂದಾಪುರದ ರೈತ ಸಂಪರ್ಕ ಕೇಂದ್ರದ ಪಕ್ಕದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಅವರ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಪೂಜೆ ಮತ್ತು ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಆನಂದ್ ಟೈಗರ್, ಗ್ರೇಡ್ ೨ ತಹಶೀಲ್ದಾರ್ ವೆಂಕಟೇಶ್ ದುಗ್ಗನ್, ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ಮಹಮ್ಮದ್ ಗಫರ್, ಪುರಸಭೆ ಅಧಿಕಾರಿಗಳಾದ ನಿಂಗಮ್ಮ ಬಿರಾದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಪ್ರಭುಲಿಂಗ, ಬಿಸಿಎಂ ಅಧಿಕಾರಿಗಳಾದ ಅನಸೂಯ ಚವ್ಹಾಣ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲಕ್ಷ್ಮಣ್, ಬಿಸಿಯೂಟ ಅಧಿಕಾರಿಗಳಾದ ಜಯಪ್ಪ ಚಾಪಲ್, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಕವಿತಾ ಮಡಿವಾಳ, ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ್, ತಾಲೂಕ ಗೌರವಾಧ್ಯಕ್ಷರಾದ ರಮೇಶ್ ಪಡಶೆಟ್ಟಿ, ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ್ ದೇಸಾಯಿ,
ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಪವನ್ ಪಾಟೀಲ್, ಮಲ್ಲಿನಾಥ್ ಮೇಲಗಿರಿ, ಶಿವಶರಣಪ್ಪ ಡೇಂಗಿ, ಪ್ರದೀಪ್ ದೇಶಮುಖ, ರೇವಣಸಿದ್ದಪ್ಪ ದಾದಾಪುರ, ಸುರೇಶ್ ದೇಶಪಾಂಡೆ, ವಿಜಯಕುಮಾರ್ ಬಳಕೇರಿ, ಚಂದ್ರಶೇಖರ್ ಪಾರ, ಸಿದ್ದಣ್ಣ ಪಾಟೀಲ, ಮಲ್ಲಿಕಾರ್ಜುನ ಪಾಲಾಮೂರ್, ವಿವೇಕ್ ಪಾಟೀಲ್, ಪವನ್ ಪಾಟೀಲ್ ದೇಗಲ್ಮಡಿ, ಗಿರಿರಾಜ್ ಸಜ್ಜನ್, ಶಿವಯೋಗಿ ರುಸ್ತoಪೂರ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ: ಎಸ್ ವಿ ಗಂಗಾಣಿ.




















