ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕನಕದಾಸರು ( ಕಥನ ಕವನ.)

“ಯಾರು ಹೋಗುತ್ತೀರಿ ಸ್ವರ್ಗಕ್ಕೆ “
ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,
ಶಿಷ್ಯ ರೆಲ್ಲರೂ ನೋಡಿಕೊಂಡರು,
ತಮ್ಮ ತಮ್ಮ ಮುಖಾರವಿಂದ,
ಎಲ್ಲರಿಗೂ ತಮ್ಮೊಳಗೇ ಅನುಮಾನ,
” ನೀ ಏನಂತಿಯೋ ಕನಕ”
ಅಂದರು, ಗುರುವರ್ಯರು,
” ನಾ ಹೋದರೆ ಹೋದೇನು”
ಅಂದರು ಕನಕ ದಾಸರು,
ಅಂದರಾಗ ಉಳಿದ ಶಿಷ್ಯರು,
ಕನಕನಿಗೆ ಕೊಬ್ಬು ಅತಿಯಾಯಿತು ಅದಕ್ಕೇ
ಹೀಗೆಲ್ಲ ಆಡತಾನೆ,
ಕನಕನನ್ನು ನೋಡಿ
ಅಪಹಾಸ್ಯ ಮಾಡಿ,
ಮಾತನಾಡಿದರು ದಾಸರನೇಕರು,
ಗುರುಗಳಿಗೆ ಮಾತ್ರ ಗೊತ್ತಾಯಿತು ಅವರಾಗ,
“ಭಲೇ ಕನಕ” ಎಂದು ಬೆನ್ನು
ತಟ್ಟಿದರು, ಅವರೇ ಮಾತಿನ
ಮರ್ಮವನು
ಬಹಿರಂಗ ಪಡಿಸಿದರು,
ಶಿಷ್ಯ ಗಣವೆಲ್ಲಾ
ತಗ್ಗಿಸಿತು ತಲೆಯ,
ತಿಳಿದರು ಕನಕನ ಮಾತಿನ
ಅಂತರಾರ್ಥ, ಬಿಡಬೇಕು
ನಾನು ಎಂಬ ಅಹಂಕಾರ,
ಆದೀತು ಆಗ
ಭಗವಂತನ ಸಾಕ್ಷಾತ್ಕಾರ.
ಸಾರಿದರು ಕನಕದಾಸರು
ಲೋಕಕ್ಕೆ ಈ ಮಾತಿನ ಸಾರ,
ಇವರಾದರು
ವ್ಯಾಸರಾಯರ ಶಿಷ್ಯರು,
ಇವರೇ ನಮ್ಮ ದಾಸ ಶ್ರೇಷ್ಠ
ಕನಕದಾಸರು.

  • ಶಿವಪ್ರಸಾದ್ ಹಾದಿಮನಿ. ✍️
    ಕೊಪ್ಪಳ.
    ಮೊಬೈಲ್. 7996790189.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!