ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಇಲಾಖೆಯ ಸಿಬ್ಬಂದಿಗಳು ಹಾಗೂ ತಾಲೂಕಿನ ಮುಖಂಡರ ಸಮ್ಮುಖದಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಶ್ರೀ ಹನಮಂತ ಶಿರಹಟ್ಟಿ ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟಿಯನ್ನು ಕಟ್ಟಿ ನೀರ ಎರೆದವರ ಯಾರು ಅಡವಿಯೊಳಗಿನ ಪ್ರಾಣಿ ಪಕ್ಷಿಗಳಿಗೆ ಅಡಿಗಡಿಗೆ ಆಹಾರ ವಿಟ್ಟವರರು ಯಾರು ಕಲ್ಲಿನಲ್ಲಿ ಕೂಗುವ ಕಪ್ಪೆಗಳಿಗೆ ಆಹಾರ ನೀಡಿದವರು ಯಾರು ಅದಕ್ಕಾಗಿ ಚಿಂತಿಸದಿರು ತಾಳು ಮನವೇ ಕಾಗಿನೆಲೆ ಆದಿಕೇಶವ ಎಲ್ಲರನ್ನೂ ಸಲಹುವನು ಎಂದು ಕನಕದಾಸರು ನುಡಿದ ವಾಕ್ಯವನ್ನು ನೆನೆಯುತ್ತಾ ಕನಕದಾಸರ ಜಯಂತಿಯನ್ನು ಆಚರಿಸಿದರು.
ವರದಿ ಮಂಜು. ಎಂ. ಚಿಕ್ಕಣ್ಣವರ



















